Sunday 25 March 2012

ವಚನ ಸಿಂಚನ ೩೦:ಇಷ್ಟಲಿಂಗ-ಪ್ರಾಣಲಿಂಗ

ಬೆಂಕಿಗೆ ಉರಿ ಮೊದಲೋ,ಹೊಗೆ ಮೊದಲೋ,
ಎಂಬುದನರಿದಲ್ಲಿ ಇಷ್ಟಲಿಂಗ ಸಂಬಂಧಿ,
ಉಭಯವನಳಿದಲ್ಲಿ ಪ್ರಾಣಲಿಂಗ  ಸಂಬಂಧಿ,
ಆ ಉಭಯ ನಷ್ಟವಾದಲ್ಲಿ,
ಏನೂ ಎನಲಿಲ್ಲ, ಜಾಂಬೇಶ್ವರ ..
                 -ರಾಯಸದ ಮಂಚಣ್ಣ 

ಈ ವಚನದಲ್ಲಿ ರಾಯಸದ ಮಂಚಣ್ಣ ಇಷ್ಟಲಿಂಗ ಮತ್ತು ಪ್ರಾಣಲಿಂಗ ಸಂಭಂದದ ಬಗ್ಗೆ ಬೆಂಕಿ ಮತ್ತು ಹೊಗೆಯ ನಿದರ್ಶನದ ಮೂಲಕ ವಿಮರ್ಶಿಸುತ್ತಾರೆ.ಬೆಂಕಿ ಮತ್ತು ಹೋಗೆ ಇವೆರಡರಲ್ಲಿ ಯಾವುದು ಮೊದಲು,ಹೀಗೆ ಬೀಜ ಮತ್ತು ಮರಗಳಲ್ಲಿಯ ಸಂಭಂದವನ್ನು ಅರಿದರೆ ಆತ ಇಷ್ಟಲಿಂಗ ಸಂಭಂದಿ ಆಗುತ್ತಾನೆ.ಇಷ್ಟಲಿಂಗ ಅಂದರೆ ವಿಶ್ವದಾಕಾರದಲ್ಲಿರುವ ಸಾಕಾರ ರೂಪ,ಸಾಮಾಜಿಕ ಸಮಾನತೆಯ ಕುರುಹು.ಇಂಥ ಒಗಟನ್ನು ಅರ್ಥ ಮಾಡಿಕೊಂಡರೆ ಇಡೀ ವಿಶ್ವ ಸ್ವರೂಪವಾದ ಇಷ್ಟಲಿಂಗವನ್ನು ಅರ್ಥೈಸಿಕೊಂಡಂತೆ.ಜೀವಲಿಂಗವಾದ ಇಷ್ಟಲಿಂಗದಲ್ಲಿ ಶಿವನ ಅಸ್ತಿತ್ವ ಇದೆ,ಅದೇ ಪ್ರಾಣಲಿಂಗ.ಇಲ್ಲಿ ಬೆಂಕಿ ಮತ್ತು ಹೋಗೆ,ಬೀಜ ಮತ್ತು ಮರ ಇವುಗಳಲ್ಲಿ ಅಡಗಿರುವ ಶಕ್ತಿಯೇ ಪ್ರಾಣಲಿಂಗ ಎಂದು ಭಾವಿಸಬಹುದು.ಈ ಉಭಯ ವಸ್ತುಗಳು ಇಲ್ಲವಾದರೆ ಅದೇನು ನಷ್ಟವಲ್ಲ ಎಂದು ಹೇಳುತ್ತಾರೆ.

ಇಷ್ಟಲಿಂಗ ಪ್ರಾಣಲಿಂಗ ಮತ್ತು ಭಾವಲಿಂಗಗಳನ್ನು ಸಂಭದಗೊಳಿಸುವುದೇ ಸಂಸ್ಕಾರ...
ಇಷ್ಟಲಿಂಗವು ೧೨ನೆ ಶತಮಾನದ ಕಲ್ಯಾಣ ಕ್ರಾಂತಿಯ ಮುಖ್ಯ ರೂಪವೂ ಹೌದು.


 

4 comments:

  1. ಚೆನ್ನಾಗಿದೆ ವಿವರ... ರಾಯಸ ಮಂಚಣ್ಣ ಬಗ್ಗೆ ಮಾಹಿತಿ ಇದ್ದರೆ ತಿಳಿಸಿ ಗಿರೀಶ್

    ReplyDelete
    Replies
    1. ರಾಯಸದ ಮಂಚಣ್ಣ ಮತ್ತು ರಾಯಮ್ಮ ಇಬ್ಬರು ಗಂಡ ಹೆಂಡತಿ ಎಂದಷ್ಟೇ ಮಾಹಿತಿ ಸಿಕ್ಕಿತು.... ಹೆಚ್ಚಿನ ಮಾಹಿತಿ ಸಿಕ್ಕಿದರೆ ತಿಳಿಸುತ್ತೇನೆ...

      Delete
  2. ಓಹೋ, ಹೆಸರೇ ಕೇಳಿರಲಿಲ್ಲ.. ಒಳ್ಳೆ ವಚನ ಮತ್ತೆ ರಚನೆಕಾರರ ಪರಿಚಯ :) ಇನ್ನೂ ಮಾಹಿತಿ ಸಿಗಬಹುದೇ ?

    ReplyDelete
    Replies
    1. ಈಶ್ವರ ಕಿರಣರೆ,ಇನ್ನಷ್ಟು ಮಾಹಿತಿ ಸಿಕ್ಕರೆ ಖಂಡಿತ ತಿಳಿಸುತ್ತೇನೆ.... ತುಂಬ ಪುಸ್ತಕದಲ್ಲಿ ಹುಡುಕಿದೆ..ಅಷ್ಟಾಗಿ ಸಿಗಲಿಲ್ಲ...ಪ್ರಯತ್ನಿಸುತ್ತೇನೆ...

      Delete