Sunday 27 November 2011

ವಚನ ಸಿಂಚನ ೧೩:ಭಕ್ತಿ ಮತ್ತು ಪ್ರೀತಿ

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ,
ಲಿಂಗದ ಮೇಲೆ ನಿಷ್ಠೆ ಇಲ್ಲದ ಭಕ್ತ,
ಇದ್ದಡೆನೋ ಶಿವ ಶಿವಾ ಹೋದಡೆನೋ
ಕೂಡಲಸಂಗಮದೇವಾ ಹಡೆದ ಆವಿಂಗೆ ಉಣ್ಣದ ಕರುವ  ಬಿಟ್ಟಂತೆ..
                                                           -ಬಸವಣ್ಣ


ಇಲ್ಲಿ ಬಸವಣ್ಣನವರು ಪ್ರೀತಿ,ಭಕ್ತಿ,ಮಮತೆ ಮತ್ತು ಅವಶ್ಯಕತೆಗಳ ಬಗ್ಗೆ ಇರುವ ಸಾಮ್ಯತೆಯನ್ನು ವಿವರಿಸುತ್ತಾರೆ...
ಹೆಂಡತಿಗೆ ತನ್ನ ಗಂಡನ ಮೇಲೆ ಪ್ರೀತಿ ಸ್ನೇಹ ಇಲ್ಲದಿದ್ದರೆ ಅಂತ ಬದುಕಿದೆ ಅರ್ಥ ಇರುವುದಿಲ್ಲ...ಸಂಸಾರ ನಿಭಾಯಿಸುವುಸು ಕಷ್ಟ...ಅದೇ ರೀತಿ ಎದೆ ಮೇಲೆ  ಲಿಂಗವನ್ನು  ಕಟ್ಟಿಕೊಂದು ಅದನ್ನು ಪೂಜಿಸದೇ ಇದ್ದರೆ,ಅದನ್ನು ಆರಾಧಿಸದೆ ಇದ್ದರೆ ಸುಮ್ಮನೆ ಕಾಟಾಚಾರಕ್ಕೆ ಕಟ್ಟಿಕೊಂಡ ಹಾಗೆ ಆಗುತ್ತದೆ....ಇಂಥಹ ನಿಷ್ಠೆ ಇಲ್ಲದ ಭಕ್ತಿ ನಿಷ್ಪ್ರಯೋಜಕ ಎಂದು ಭಾವಿಸುತ್ತಾರೆ...

ಇಂಥಹ ಹೆಂಡತಿ ಮತ್ತು ಭಕ್ತರು ಇದ್ದರೇನು ಹೋದರೇನು ಎಂದು ಕೇಳುತ್ತಾರೆ.. ಅವರಿಂದ ಯಾವುದೇ ಮಹಾತ್ಕಾರ್ಯ ಆಗುವುದಿಲ್ಲ ಎಂದು ಹೇಳುತ್ತಾ,ಇವರನ್ನು ಹಡೆದ ಆಕಳಿನ ಹತ್ತಿರ ತನ್ನ ಕರುವನ್ನು  ಹಾಲು ಉಣ್ಣಲು ಬಿಟ್ಟರೆ ಅದು ಹಾಲುಣದೆ ತನ್ನ ತಾಯಿಯ ಪ್ರೀತಿ ಮತ್ತು ಮಮತೆ ಇಂದ ವಂಚಿತವಾದಂತೆ ಹೆಂಡತಿ ಗಂಡನ ಸ್ನೇಹದಿಂದ ವಂಚಿತಳಾಗುತ್ತಾಳೆ ಎಂದು ಹೋಲಿಸುತ್ತಾರೆ.....

Tuesday 15 November 2011

ವಚನ ಸಿಂಚನ ೧೨:ನಾಯಕತ್ವ

ಓಲೆ ಹತ್ತಿಯುರಿದೊಡೆ ನಿಲಬಹುದಲ್ಲದೆ
ಧರೆ ಹತ್ತಿಯುರಿದೊಡೆ ನಿಲಬಾರದು.
ಏರಿ ನೀರುಣ್ಬೋಡೆ, ಬೇಲಿ ಕೆಯ್ಯ ಮೇವೊಡೆ  ,
ನಾರಿ ತನ್ನ ಮನೆಯಲ್ಲಿ ಕಳುವೊಡೆ
ಇನ್ನಾರಿಗೆ ದೂರುವೆ ಕೂಡಲಸಂಗಮದೇವಾ ?
                                                --ಬಸವಣ್ಣ

ಇಲ್ಲಿ ಬಸವಣ್ಣನವರು ನಾಯಕತ್ವದ ಬಗ್ಗೆ ವಿಚಾರ ಮಾಡುತ್ತಾರೆ.ಕೆಲವು ಉದಾಹರಣೆಗಳನ್ನೂ ಕೊಡುತ್ತ ಇಲ್ಲಿ ನಾಯಕ ಮತ್ತು ಅವನ ಗುಣಗಳ ಬಗ್ಗೆ ಇಲ್ಲಿ ವಿಶ್ಲೇಷಿಸುತ್ತಾರೆ.
ಒಂದು ಓಲೆ ಉರಿಯುತ್ತಿದ್ದರೆ ಅದರ ಮುಂದೆ ನಿಲ್ಲ ಬಹುದು ಅಥವಾ ಅದನ್ನು ನಿಂದಿಸಬಹುದು.ಅದೇ,ಇಡಿ ಜೀವ ರಾಷಿಗಳೇ ಅವಲಂಬಿಸಿರುವ ,ಸಕಲ ಜೀವಗಳ ನೆಲೆಗೆ ಸಾಕ್ಷಿ ಆಗಿರುವ ಭೂಮಿಯೇ ಉರಿಯುತ್ತಿದ್ದರೆ ಏನು ಮಾಡಲ ಆಗದು ಅಲ್ಲವೇ?
ಇದೆ ರೀತಿ ಕೆರೆಗೆ ಏರಿಯನ್ನು ನೆರು ಸಂಗ್ರಹಿಸಲು ಅಥವಾ ನೀರನ್ನು ತಡೆಯಲು ಕಟ್ಟಿರುತ್ತಾರೆ,ಆ ಏರಿಯೇ ನೀರನ್ನು ಕುಡಿದರೆ ಅನಾಹುತವಲ್ಲವೇ?
ಅದೇ ರೀತಿ ಹೊಲದಲ್ಲಿ ಬೇಲಿಯನ್ನು ಸಂರಕ್ಷಿಸಲು ಹಾಕಿರುತ್ತಾರೆ,ಆ ಬೇಲಿಯೇ ಎದ್ದು ಹೊಲದ ತುಂಬಿ ಬೆಳೆದರೆ ಬೇರೆ ಬೆಳೆಯನ್ನು ಬೆಳೆಯಲು ಅಸಾಧ್ಯ...ಬೇಲಿಯೇ ಎದ್ದು ಹೊಲ ಮೇಯ್ದರೆ ಏನು ಮಾಡಲು ಆಗುವುದಿಲ್ಲ...
ಹಾಗೆ ಒಂದು ಸಂಸಾರದಲ್ಲಿ ಮನೆಯ ಯಜಮಾನಿ ಅನ್ನಿಸಿಕೊಂಡ ಮತ್ತು ಸಂಸಾರ ನಿಭಾಯಿಸಬೇಕಾದ  ಒಂದು ಹೆಣ್ಣು ತನ್ನ ಮನೆಯಲ್ಲಿ ಕಳ್ಳತನ ಮಾಡಿದರೆ ಆ ಮನೆ ಇನ್ನೆಷ್ಟರ ಮಟ್ಟಿಗೆ ಸುಧಾರಿಸುತ್ತದೆ ಅಲ್ಲವೇ?
ಈ ರೀತಿ ನಾಯಕ ಎನ್ನಿಸಿ ಕೊಂಡವರೆ ತಪ್ಪು ಮಾಡಿದರೆ ನಾನು ಇನ್ನು ಯಾರಿಗೆ ದೂರಲಿ ಎಂದು ಕೂಡಲ ಸಂಗಮ ದೇವನಲ್ಲಿ ಕೇಳಿಕೊಳ್ಳುತ್ತಾರೆ... 

Sunday 13 November 2011

ವಚನ ಸಿಂಚನ ೧೧ :ಸ್ವರ್ಗ ನರಕ

ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರೋ !
ಸತ್ಯವ ನುಡಿವುದೇ ದೇವಲೋಕ..
ಮಿಥ್ಯವ ನುಡಿವುದೇ ಮರ್ತ್ಯಲೋಕ..
ಆಚಾರವೇ ಸ್ವರ್ಗ,ಅನಾಚಾರವೇ ನರಕ..
ಕೂಡಲಸಂಗಮದೇವಾ,ನೀವೇ ಪ್ರಮಾಣು
                                                 -ಬಸವಣ್ಣ

ಇಲ್ಲಿ ಬಸವಣ್ಣನವರು ಜನರಲ್ಲಿರುವ ಸ್ವರ್ಗ,ನರಕ ಎಂಬ ಮೂಢನಂಬಿಕೆಗಳನ್ನು ಸ್ವಲ್ಪ ಖಾರವಾಗಿ ವಿರೋಧಿಸುತ್ತಾರೆ....ಇವೇ ಅಲ್ಲದೆ ಪಾಪ,ಪುಣ್ಯ,ದೇವಲೋಕ,ಪಾತಾಳ ಲೋಕ ಎಂಬ ಮೂಢ(ಅಪ)ನಂಬಿಕೆಗಳು ಜನರಲ್ಲಿ ಭೇರು ಬಿಟ್ಟಿವೆ...ಅದಕ್ಕೆ ಬಸವಣ್ಣನವರು ಹೇಳುತ್ತಾರೆ,ದೇವಲೋಕ ಮರ್ತ್ಯಲೋಕ ಎಂದು ಬೇರೆ ಬೇರೆ ಇಲ್ಲ,,ಎಲ್ಲಿ ಸತ್ಯ ನುಡಿಯುತ್ತಾರೋ ,ಎಲ್ಲಿ ಸತ್ಯಕ್ಕೆ ಬೆಲೆ ಇದೆಯೋ ಅದೇ ದೇವಲೋಕ,ಎಲ್ಲಿ ಸುಳ್ಳುಗಳನ್ನೇ ಹೇಳುತ್ತಾರೋ ಅದೇ ಮರ್ತ್ಯಲೋಕ...

ಎಲ್ಲಿ ಆಚಾರ ವಿಚಾರಗಳು ನಡೆಯುತ್ತವೋ ,ಎಲ್ಲಿ ಆಚಾರವಂತರು ಇದ್ದಾರೋ,ಎಲ್ಲಿ ವಿನಯವಂತರು ಇದ್ದಾರೋ ಅದಕ್ಕಿಂತ ಸ್ವರ್ಗ ಬೇರೆ ಇಲ್ಲ... ಇಂಥ ಪರಿಸರವೇ ಸ್ವರ್ಗ ಲೋಕ ಎಂದು ಭಾವಿಸುತ್ತಾರೆ...
ಈಲಿ ಆದರ,ಅನಾಚಾರ,ಮೋಸ,ಲಂಚ ಇವೆಲ್ಲಾ ಇರುತ್ತದೋ ಅದೇ ನರಕ..ಅದಕ್ಕಿಂತ ಕೆಟ್ಟ ನರಕ ಬೇರೆ ಇಲ್ಲ  ಎಂದು ಹೇಳುತ್ತಾ
ಆಚಾರವಂತರಾಗಿ ಬಾಳಿ ಸ್ವರ್ಗದಂಥ ಪರಿಸರವನ್ನು ಬೆಳೆಸಿ ಎಂದು ಸೂಚಿಸುತ್ತಾ ಜನರ ಎಲ್ಲ ನಡವಳಿಕೆಗಳಿಗೆ ನೀವೇ ಸಾಕ್ಷಿ ಎಂದು ಕೂಡಲಸಂಗಮದೇವನಲ್ಲಿ ಬೇಡಿಕೊಳ್ಳುತ್ತಾರೆ...

Monday 7 November 2011

ವಚನ ಸಿಂಚನ ೧೦: ಶಿವ ಭಕ್ತರು

ಬೇವಿನ ಬೀಜವ ಬಿತ್ತಿ,
ಬೆಲ್ಲದ ಕಟ್ಟೆಯ ಕಟ್ಟಿ,
ಆಕಳ ಹಾಲನೆರೆದು,
ಜೇನು ತುಪ್ಪವ ಹೊಯ್ದಡೆ,
ಸಿಹಿಯಾಗಬಲ್ಲುದೆ,ಕಹಿಯವುದಲ್ಲದೆ
ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು
ಕೂಡಲಸಂಗಮದೇವಾ...
                          -ಬಸವಣ್ಣ

ಬೇವಿನ ಹಣ್ಣು ಮತ್ತು ಎಲೆ ಎರಡು ಕಹಿಯಾಗಿರುತ್ತದೆ... ಬೇವು ಎಂದರೆ ಕಹಿ.. ,ಇಂಥ ಬೇವಿನ ಬೀಜವನ್ನು ಬಿತ್ತಿ,ಅದನ್ನು ಸಿಹಿಯಾಗಿಸಲು ಪ್ರಯತ್ನಿಸುವುದು ಮೂರ್ಖತನ.. ಬೀಜವನ್ನು ಬಿತ್ತಿ ಸುತ್ತ ಸಿಹಿಯಾದ ಬೆಲ್ಲದಿಂದ ಕಟ್ಟೆಯನ್ನು ಕಟ್ಟಿ,ನೀರಿನ ಬದಲು ಹಾಲನ್ನು ಸುರಿದು,ಅದರ ಸುತ್ತ ಜೇನು ತುಪ್ಪವನ್ನು ಸುರಿದು,ಇನ್ನೂ ಅನೇಕ ಸಿಹಿ ಪದಾರ್ಥಗಳನ್ನು ಅದರ ಸುತ್ತ ಹಾಕಿದರೂ ಕೂಡ,ಆ ಓದು ಬೀಜ ಮೊಳಕೆ ಒಡೆದು ಗಿಡವಾದಾಗ ಅದರ ಎಲೆಗಳಾಗಲಿ ಹೂವಾಗಲಿ ಕಹಿಯಾಗಿಯೇ ಇರುತ್ತದೆ.. ಅದು ತನ್ನ ನೈಜ ಸತ್ವವಾದ ಕಹಿ ಅಂಶವನ್ನು ಬಿಡುವುದಿಲ್ಲ...ನಿಂಬೆ ಹಣ್ಣಿನ ಗಿಡ ತನ್ನ ಹುಳಿ ಅಂಶವನ್ನು ಹೇಗೆ ಬಿದುವುದಿಲ್ಲವೋ ಅದೇ ರೀತಿ ಬೇವಿನ ಗಿಡ...ಬೇವಿಗೆ ಕಹಿ ಮತ್ತು ನಿಂಬೆ ಹಣ್ಣಿಗೆ ಹುಳಿ ನೈಸರ್ಗಿಕವಾದ ಸತ್ವ,ಅದನ್ನು ಬೇರೆ ಮಾಡಲು ಸಾಧ್ಯವಿಲ್ಲ...

ಇದೆ ರೀತಿ ಶಿವಭಕ್ತರಲ್ಲದವರನ್ನು ಮಾತಾಡಿಸುವುದು,ಅವರ ಜೊತೆಗೆ ವ್ಯವಹಾರ ಮಾಡುವುದು ತುಂಬ ಕಷ್ಟ...ಶಿವ ಭಕ್ತರು ಅಂದರೆ ಸಾತ್ವಿಕರೂ ಸಜ್ಜನರೂ ಎಂದು ಬಸವಣ್ಣನವರು ಅಭಿಪ್ರಾಯ ಪಡುತ್ತಾರೆ .. ಅಂಥವರ ಜೊತೆ ವ್ಯವಹರಿಸುವುದು ಬೆವಿನಷ್ಟೇ ಕಹಿ ಆದ ಅನುಭವ ಎಂದು ಹೇಳುತ್ತಾರೆ.....