Sunday 13 November 2011

ವಚನ ಸಿಂಚನ ೧೧ :ಸ್ವರ್ಗ ನರಕ

ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರೋ !
ಸತ್ಯವ ನುಡಿವುದೇ ದೇವಲೋಕ..
ಮಿಥ್ಯವ ನುಡಿವುದೇ ಮರ್ತ್ಯಲೋಕ..
ಆಚಾರವೇ ಸ್ವರ್ಗ,ಅನಾಚಾರವೇ ನರಕ..
ಕೂಡಲಸಂಗಮದೇವಾ,ನೀವೇ ಪ್ರಮಾಣು
                                                 -ಬಸವಣ್ಣ

ಇಲ್ಲಿ ಬಸವಣ್ಣನವರು ಜನರಲ್ಲಿರುವ ಸ್ವರ್ಗ,ನರಕ ಎಂಬ ಮೂಢನಂಬಿಕೆಗಳನ್ನು ಸ್ವಲ್ಪ ಖಾರವಾಗಿ ವಿರೋಧಿಸುತ್ತಾರೆ....ಇವೇ ಅಲ್ಲದೆ ಪಾಪ,ಪುಣ್ಯ,ದೇವಲೋಕ,ಪಾತಾಳ ಲೋಕ ಎಂಬ ಮೂಢ(ಅಪ)ನಂಬಿಕೆಗಳು ಜನರಲ್ಲಿ ಭೇರು ಬಿಟ್ಟಿವೆ...ಅದಕ್ಕೆ ಬಸವಣ್ಣನವರು ಹೇಳುತ್ತಾರೆ,ದೇವಲೋಕ ಮರ್ತ್ಯಲೋಕ ಎಂದು ಬೇರೆ ಬೇರೆ ಇಲ್ಲ,,ಎಲ್ಲಿ ಸತ್ಯ ನುಡಿಯುತ್ತಾರೋ ,ಎಲ್ಲಿ ಸತ್ಯಕ್ಕೆ ಬೆಲೆ ಇದೆಯೋ ಅದೇ ದೇವಲೋಕ,ಎಲ್ಲಿ ಸುಳ್ಳುಗಳನ್ನೇ ಹೇಳುತ್ತಾರೋ ಅದೇ ಮರ್ತ್ಯಲೋಕ...

ಎಲ್ಲಿ ಆಚಾರ ವಿಚಾರಗಳು ನಡೆಯುತ್ತವೋ ,ಎಲ್ಲಿ ಆಚಾರವಂತರು ಇದ್ದಾರೋ,ಎಲ್ಲಿ ವಿನಯವಂತರು ಇದ್ದಾರೋ ಅದಕ್ಕಿಂತ ಸ್ವರ್ಗ ಬೇರೆ ಇಲ್ಲ... ಇಂಥ ಪರಿಸರವೇ ಸ್ವರ್ಗ ಲೋಕ ಎಂದು ಭಾವಿಸುತ್ತಾರೆ...
ಈಲಿ ಆದರ,ಅನಾಚಾರ,ಮೋಸ,ಲಂಚ ಇವೆಲ್ಲಾ ಇರುತ್ತದೋ ಅದೇ ನರಕ..ಅದಕ್ಕಿಂತ ಕೆಟ್ಟ ನರಕ ಬೇರೆ ಇಲ್ಲ  ಎಂದು ಹೇಳುತ್ತಾ
ಆಚಾರವಂತರಾಗಿ ಬಾಳಿ ಸ್ವರ್ಗದಂಥ ಪರಿಸರವನ್ನು ಬೆಳೆಸಿ ಎಂದು ಸೂಚಿಸುತ್ತಾ ಜನರ ಎಲ್ಲ ನಡವಳಿಕೆಗಳಿಗೆ ನೀವೇ ಸಾಕ್ಷಿ ಎಂದು ಕೂಡಲಸಂಗಮದೇವನಲ್ಲಿ ಬೇಡಿಕೊಳ್ಳುತ್ತಾರೆ...

No comments:

Post a Comment