Sunday 27 November 2011

ವಚನ ಸಿಂಚನ ೧೩:ಭಕ್ತಿ ಮತ್ತು ಪ್ರೀತಿ

ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ,
ಲಿಂಗದ ಮೇಲೆ ನಿಷ್ಠೆ ಇಲ್ಲದ ಭಕ್ತ,
ಇದ್ದಡೆನೋ ಶಿವ ಶಿವಾ ಹೋದಡೆನೋ
ಕೂಡಲಸಂಗಮದೇವಾ ಹಡೆದ ಆವಿಂಗೆ ಉಣ್ಣದ ಕರುವ  ಬಿಟ್ಟಂತೆ..
                                                           -ಬಸವಣ್ಣ


ಇಲ್ಲಿ ಬಸವಣ್ಣನವರು ಪ್ರೀತಿ,ಭಕ್ತಿ,ಮಮತೆ ಮತ್ತು ಅವಶ್ಯಕತೆಗಳ ಬಗ್ಗೆ ಇರುವ ಸಾಮ್ಯತೆಯನ್ನು ವಿವರಿಸುತ್ತಾರೆ...
ಹೆಂಡತಿಗೆ ತನ್ನ ಗಂಡನ ಮೇಲೆ ಪ್ರೀತಿ ಸ್ನೇಹ ಇಲ್ಲದಿದ್ದರೆ ಅಂತ ಬದುಕಿದೆ ಅರ್ಥ ಇರುವುದಿಲ್ಲ...ಸಂಸಾರ ನಿಭಾಯಿಸುವುಸು ಕಷ್ಟ...ಅದೇ ರೀತಿ ಎದೆ ಮೇಲೆ  ಲಿಂಗವನ್ನು  ಕಟ್ಟಿಕೊಂದು ಅದನ್ನು ಪೂಜಿಸದೇ ಇದ್ದರೆ,ಅದನ್ನು ಆರಾಧಿಸದೆ ಇದ್ದರೆ ಸುಮ್ಮನೆ ಕಾಟಾಚಾರಕ್ಕೆ ಕಟ್ಟಿಕೊಂಡ ಹಾಗೆ ಆಗುತ್ತದೆ....ಇಂಥಹ ನಿಷ್ಠೆ ಇಲ್ಲದ ಭಕ್ತಿ ನಿಷ್ಪ್ರಯೋಜಕ ಎಂದು ಭಾವಿಸುತ್ತಾರೆ...

ಇಂಥಹ ಹೆಂಡತಿ ಮತ್ತು ಭಕ್ತರು ಇದ್ದರೇನು ಹೋದರೇನು ಎಂದು ಕೇಳುತ್ತಾರೆ.. ಅವರಿಂದ ಯಾವುದೇ ಮಹಾತ್ಕಾರ್ಯ ಆಗುವುದಿಲ್ಲ ಎಂದು ಹೇಳುತ್ತಾ,ಇವರನ್ನು ಹಡೆದ ಆಕಳಿನ ಹತ್ತಿರ ತನ್ನ ಕರುವನ್ನು  ಹಾಲು ಉಣ್ಣಲು ಬಿಟ್ಟರೆ ಅದು ಹಾಲುಣದೆ ತನ್ನ ತಾಯಿಯ ಪ್ರೀತಿ ಮತ್ತು ಮಮತೆ ಇಂದ ವಂಚಿತವಾದಂತೆ ಹೆಂಡತಿ ಗಂಡನ ಸ್ನೇಹದಿಂದ ವಂಚಿತಳಾಗುತ್ತಾಳೆ ಎಂದು ಹೋಲಿಸುತ್ತಾರೆ.....

No comments:

Post a Comment