Monday 7 November 2011

ವಚನ ಸಿಂಚನ ೧೦: ಶಿವ ಭಕ್ತರು

ಬೇವಿನ ಬೀಜವ ಬಿತ್ತಿ,
ಬೆಲ್ಲದ ಕಟ್ಟೆಯ ಕಟ್ಟಿ,
ಆಕಳ ಹಾಲನೆರೆದು,
ಜೇನು ತುಪ್ಪವ ಹೊಯ್ದಡೆ,
ಸಿಹಿಯಾಗಬಲ್ಲುದೆ,ಕಹಿಯವುದಲ್ಲದೆ
ಶಿವಭಕ್ತರಲ್ಲದವರ ಕೂಡೆ ನುಡಿಯಲಾಗದು
ಕೂಡಲಸಂಗಮದೇವಾ...
                          -ಬಸವಣ್ಣ

ಬೇವಿನ ಹಣ್ಣು ಮತ್ತು ಎಲೆ ಎರಡು ಕಹಿಯಾಗಿರುತ್ತದೆ... ಬೇವು ಎಂದರೆ ಕಹಿ.. ,ಇಂಥ ಬೇವಿನ ಬೀಜವನ್ನು ಬಿತ್ತಿ,ಅದನ್ನು ಸಿಹಿಯಾಗಿಸಲು ಪ್ರಯತ್ನಿಸುವುದು ಮೂರ್ಖತನ.. ಬೀಜವನ್ನು ಬಿತ್ತಿ ಸುತ್ತ ಸಿಹಿಯಾದ ಬೆಲ್ಲದಿಂದ ಕಟ್ಟೆಯನ್ನು ಕಟ್ಟಿ,ನೀರಿನ ಬದಲು ಹಾಲನ್ನು ಸುರಿದು,ಅದರ ಸುತ್ತ ಜೇನು ತುಪ್ಪವನ್ನು ಸುರಿದು,ಇನ್ನೂ ಅನೇಕ ಸಿಹಿ ಪದಾರ್ಥಗಳನ್ನು ಅದರ ಸುತ್ತ ಹಾಕಿದರೂ ಕೂಡ,ಆ ಓದು ಬೀಜ ಮೊಳಕೆ ಒಡೆದು ಗಿಡವಾದಾಗ ಅದರ ಎಲೆಗಳಾಗಲಿ ಹೂವಾಗಲಿ ಕಹಿಯಾಗಿಯೇ ಇರುತ್ತದೆ.. ಅದು ತನ್ನ ನೈಜ ಸತ್ವವಾದ ಕಹಿ ಅಂಶವನ್ನು ಬಿಡುವುದಿಲ್ಲ...ನಿಂಬೆ ಹಣ್ಣಿನ ಗಿಡ ತನ್ನ ಹುಳಿ ಅಂಶವನ್ನು ಹೇಗೆ ಬಿದುವುದಿಲ್ಲವೋ ಅದೇ ರೀತಿ ಬೇವಿನ ಗಿಡ...ಬೇವಿಗೆ ಕಹಿ ಮತ್ತು ನಿಂಬೆ ಹಣ್ಣಿಗೆ ಹುಳಿ ನೈಸರ್ಗಿಕವಾದ ಸತ್ವ,ಅದನ್ನು ಬೇರೆ ಮಾಡಲು ಸಾಧ್ಯವಿಲ್ಲ...

ಇದೆ ರೀತಿ ಶಿವಭಕ್ತರಲ್ಲದವರನ್ನು ಮಾತಾಡಿಸುವುದು,ಅವರ ಜೊತೆಗೆ ವ್ಯವಹಾರ ಮಾಡುವುದು ತುಂಬ ಕಷ್ಟ...ಶಿವ ಭಕ್ತರು ಅಂದರೆ ಸಾತ್ವಿಕರೂ ಸಜ್ಜನರೂ ಎಂದು ಬಸವಣ್ಣನವರು ಅಭಿಪ್ರಾಯ ಪಡುತ್ತಾರೆ .. ಅಂಥವರ ಜೊತೆ ವ್ಯವಹರಿಸುವುದು ಬೆವಿನಷ್ಟೇ ಕಹಿ ಆದ ಅನುಭವ ಎಂದು ಹೇಳುತ್ತಾರೆ.....

4 comments:

  1. ವಚನ ಮತ್ತು ಮಾತು ಚೆನ್ನಾಗಿದೆ. . ಕೆಳಗಿನ ಕೆಲವು ನುಡಿಗಳೂ. ಒಳ್ಳೆ ಕೆಲಸ.

    ReplyDelete
  2. Thank you Ishwar Bhat... will be continuing this work...

    ReplyDelete
  3. ಅಮೋಘ ಸಂಗ್ರಹ ಹಾಗೂ ಪ್ರಕಟನೆ.

    ReplyDelete