Sunday 29 January 2012

ವಚನ ಸಿಂಚನ ೨೨:ನೀರು ಮತ್ತು ಮರ

ನೀರ ಕಂಡಲ್ಲಿ ಮುಳುಗವರಯ್ಯಾ
ಮರನ ಕಂಡಲ್ಲಿ ಸುತ್ತುವರಯ್ಯಾ
ಬತ್ತುವ ಜಲವ ಒಣಗುವ ಮರವ ಮೆಚ್ಚಿದವರು 
ನಿಮ್ಮ ನೆತ್ತಬಲ್ಲರು ಕೂಡಲಸಂಗಮದೇವಾ !!!
                                  -ಬಸವಣ್ಣ 

ಇಲ್ಲಿ ಬಸವಣ್ಣನವರು ಜನರಲ್ಲಿ ಮನೆ ಮಾಡಿರುವಂತಹ ಮೂಢ ನಂಬಿಕೆಗಳನ್ನು ಗಾಢವಾಗಿ ವಿರೋಧಿಸುತ್ತಾರೆ..ನೀರು ಕಂಡಾಗ ಮುಳುಗುವುದು ,ಮರ ಕಂಡಾಗ ಸುತ್ತುವುದು ಇದು ಈಗಲೂ ಜನರು  ರೂಢಿಸಿ ಕೊಂಡಿರುವ ಕ್ರಿಯೆಗಳು.ಇವುಗಳನ್ನು ಬಸವಣ್ಣ ೧೨ನೆ ಶತಮಾನದಲ್ಲೇ ವಿರೋಧಿಸಿದ್ದರು.ನೀರು ಯಾವಾಗ ಬೇಕಾದರೂ ಬತ್ತಿ ಹೋಗುತ್ತದೆ,ಅಲ್ಲದೆ ಮರ ಕೂಡ ಒಂದು ದಿನ ತನ್ನ ಆಯುಷ್ಯ ಕಳೆದು ಕೊಂಡು ಒಣಗಿ ಹೋಗುತ್ತದೆ,ಇಂಥ ನೀರು ಮರವನ್ನು ಮೆಚ್ಚಿದವರು ಲೋಕದ  ಸರ್ವಕ್ಕೂ ಕಾರಣನಾದ,ಸರ್ವ ಜೀವಕ್ಕೂ ಕಾರಣನಾದ ಪರಮೇಶ್ವರನನ್ನು ಹೇಗೆ ಅರಿಯಬಲ್ಲರು ?,ಹೇಗೆ ಕಂಡು ಕೊಳ್ಳುವರು? ಎಂದು ಸಂಗಮ ದೇವನಲ್ಲಿ ಕೇಳುತ್ತಾರೆ.

2 comments:

  1. ಸುಂದರ ವಚನ ಮತ್ತೆ ಬೇಕಾದಷ್ಟು ಅರ್ಥ. ನೀರನ್ನು ಕಂಡರೆ ಮುಳುಗುವರಯ್ಯಾ ಆಗಬೇಕೇ ?

    ReplyDelete
  2. [Ishwar Bhat]ಹೌದು ಅದು ಮುಳುಗವರಯ್ಯಾ ಆಗಬೇಕು.. ತಪ್ಪನ್ನು ಸರಿಪಡಿಸಿದ್ದೇನೆ...ತಿಳಿಸಿದಕ್ಕೆ ಧನ್ಯವಾದಗಳು...

    ReplyDelete