Monday 16 January 2012

ವಚನ-ಸಿಂಚನ ೨೦:ಶಿವ ಪಥ

ಮಡಕೆಯ ಮಾಡುವಡೆ ಮಣ್ಣೇ ಮೊದಲುತೊಡಿಗೆಯ ಮಾಡುವಡೆ ಹೊನ್ನೇ ಮೊದಲು
ಶಿವಪಥವರಿವಡೆ ಗುರುಪಥವೆ ಮೊದಲು
ನಮ್ಮ ಕೂಡಲಸಂಗಮದೇವನ ಅರಿವೊಡೆ ಶರಣರ ಸಂಗವೇ ಮೊದಲು !!!
                                                                        -ಬಸವಣ್ಣ

ಒಂದು ಮಡಕೆ ತಯಾರಿಸಬೇಕಾದರೆ ಮಣ್ಣು ಅತ್ಯವಶ್ಯಕ,ಹಾಗೆ ತೊಡಿಗೆ ಮಾಡಬೇಕೆಂದರೆ ಹೊನ್ನು ಅಷ್ಟೇ ಅವಶ್ಯ.
ಅದೇ ರೀತಿ ಶಿವಪಥವನ್ನು ಅರಿಯಬೇಕು ಅಂದರೆ ಗುರು ಪಥದ ಅರಿವಿರಬೇಕು,ಗುರುವಿನ ಜೊತೆ ಒಡನಾಟದಲ್ಲಿರಬೇಕು.ಗುರುವಿನ ಮಹತ್ವವನ್ನು ಅರಿಯಬೇಕು.
ಆದರೆ ಕೂಡಲಸಂಗಮ ದೇವನನ್ನು ಅರಿಯಬೇಕು ಅಂದರೆ ಶರಣರ ಸಾಂಗತ್ಯ ಮೊದಲು.ಅಂದರೆ ಶರಣರು ಅಷ್ಟು ಅನುಭಾವಿಗಳು,ಸಾತ್ವಿಕರು,ಜ್ಞಾನಿಗಳು ಎಂದು ಬಸವಣ್ಣ ಹೇಳುತ್ತಾರೆ.ಶರಣರು ಅನುಭವದಿಂದ ಅನುಭಾವಿಗಲಾಗಿದ್ದಾರೆ.

No comments:

Post a Comment