Sunday 1 January 2012

ವಚನ ಸಿಂಚನ ೧೮:ಧ್ಯೇಯ

ಹರ ತನ್ನ ಭಕ್ತರ ತಿರಿವಂತೆ ಮಾಡುವ |
ಒರೆದು ನೋಡುವ ಸುವರ್ಣದ ಚಿನ್ನದಂತೆ |
ಅರೆದು ನೋಡುವ ಚಂದನದಂತೆ |
ಅರಿದು ನೋಡುವ ಕಬ್ಬಿನ ಕೋಲಿನಂತೆ |
ಬೆದರದೆ ಬೆಚ್ಚದೆ ಇರ್ದಡೆ ಕರವೆತ್ತಿಕೊಂಬ ನಮ್ಮ ರಾಮನಾಥನು |
                                                        -ಜೇಡರ ದಾಸಿಮಯ್ಯ


ಶಿವ  ತನ್ನ ಭಕ್ತರಿಗೆ ಕಷ್ಟಗಳನ್ನು ಕೊಡುತ್ತಲೇ ಇರುತ್ತಾನೆ...ಅದು ಹೇಗೆ ಇರುತ್ತದೆ ಅಂದರೆ ಅಕ್ಕಸಾಲಿಗ ಒಡವೆ ಮಾಡಲು ಚಿನ್ನವನ್ನು  ಅದಕ್ಕೆ ಒಳ್ಳೆ ರೂಪು ಮತ್ತು ಬಣ್ಣ ಕೊಡಲು ಉಜ್ಜುವಂತೆ ಕ್ಲಿಷ್ಟಕರವಾಗಿರುತ್ತದೆ.ಗಂಧದ ಕೊರಡನ್ನು ಕಲ್ಲಿನಲ್ಲಿ ತೇಯುವಂತೆ ಕಷ್ಟ ವಾಗಿರುತ್ತದೆ..ಕಬ್ಬಿಣ ರಸ ತೆಗೆಯಲು ಗಾಣಕ್ಕೆ ಹಾಕಿ ಹಿಂಡುವಂತೆ ಇರುತ್ತದೆ...ಇಂಥ ಕಷ್ಟಗಳನ್ನು ಸಹಿಸಿ ಹೆದರದೆ ಧೈರ್ಯವಾಗಿ ಇದ್ದರೆ ರಾಮನಾಥನು ಅಂಥವರನ್ನು ಕೈ ಹಿಡಿದು ಎತ್ತಿಕೊಳ್ಳುವನು ಎಂದು ಜೇಡರ(ದೇವರ) ದಾಸಿಮಯ್ಯ ಹೇಳುತ್ತಾನೆ..ಅಂದರೆ ಕಷ್ಟ ಪಡುವವರನ್ನು ದೇವರು ಎಂದಿಗೂ ಕೈ ಬಿಡುವುದಿಲ್ಲ ಎಂದರ್ಥ...

No comments:

Post a Comment