Sunday 25 December 2011

ವಚನ-ಸಿಂಚನ ೧೭:ಅರಿವು

ಮುತ್ತು ನೀರಲ್ಲಾಯಿತ್ತು,ವಾರಿಕಲ್ಲು ನೀರಲ್ಲಾಯಿತ್ತು,
ಉಪ್ಪು ನೀರಲ್ಲಾಯಿತ್ತು
ಉಪ್ಪು ಕರಗಿತ್ತು,ವಾರಿಕಲ್ಲು ಕರಗಿತ್ತು,
ಮುತ್ತು ಕರಗಿದುದನಾರು ಕಾಣರು...
ಈ ಸಂಸಾರಿ ಮಾನವರು ಲಿಂಗವ ಮುಟ್ಟಿ
 ಭವಭಾರಿಗಳಾದರು  !
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯಾ!
ಚೆನ್ನಮಲ್ಲಿಕಾರ್ಜುನಯ್ಯಾ !!!
                                    -ಅಕ್ಕಮಹಾದೇವಿ

ಇಲ್ಲಿ ಅಕ್ಕಮಹಾದೇವಿ ನೀರಿನಲ್ಲಿ ಹುಟ್ಟುವ ವಸ್ತುಗಳನ್ನು ಅರಿವಿಗೆ ಹೋಲಿಸಿ ಹೇಳುತ್ತಾರೆ..
ಮುತ್ತು,ವಾರಿಕಲ್ಲು(ಆನೇಕಲ್ಲು) ಮತ್ತು ಮುತ್ತು,ಇವು ಮೂರು ಕೂಡ ನೀರಿನಲ್ಲೇ ರೂಪುಗೊಂಡಿದ್ದು... ಆದರೆ ವಾರಿಕಲ್ಲು ಮತ್ತು ಉಪ್ಪು ನೀರಿನಲ್ಲಿ ಕರಗಿ ಹೋಗುತ್ತದೆ.. ಆದರೆ ಮುತ್ತು ಮಾತ್ರ ಕರಗುವುದಿಲ್ಲ.. ಅಂದರೆ ಮುತ್ತು ಅರಿವಿನ ಸಂಕೇತ.. ಅದರ ಶುಭ್ರತೆ ಮತ್ತು ಗಟ್ಟಿತನವನ್ನು ಇಲ್ಲಿ ಅರಿವು ಎಂದು ಹೇಳಬಹುದು... "ಅರಿವೇ ಗುರು" ಎಂದು ಬಸವಣ್ಣನವರು ಹೇಳಿದಂತೆ...
ಉಪ್ಪು ವಾರಿಕಲ್ಲಿನಂತೆ ಈ ಸಂಸಾರಿಗಳು ಕರಗಿ ಹೋದರು... ನಾನು ನಿಮ್ಮನ್ನು ಮುಟ್ಟಿ ಕರಿಗೊಂಡೆನು ಎಂದು ಚೆನ್ನಮಲ್ಲಿಕಾರ್ಜುನನಲ್ಲಿ ಹೇಳಿಕೊಳ್ಳುತ್ತಾಳೆ... ಅಕ್ಕಮಹಾದೇವಿಯು ಮುತ್ತಿನಂತೆ ಅರಿವಿನ ಸಂಕೇತ..ಆದ್ದರಿಂದಲೇ ಅವಳು ಇಂದಿಗೂ ಅವಳ ವಚನಗಳ ಮೂಲಕ ಗಟ್ಟಿಯಾಗಿ ನೆಲೆ ನಿಂತಿರುವುದು...

No comments:

Post a Comment