Tuesday 7 February 2012

ವಚನ ಸಿಂಚನ ೨೩:ಭಕ್ತಿಪ್ರಿಯ

ನಾದಪ್ರಿಯ ಶಿವನೆಂಬರು ನಾದಪ್ರಿಯ ಶಿವನಲ್ಲ
 ವೇದಪ್ರಿಯ ಶಿವನೆಂಬರು ವೇದಪ್ರಿಯ ಶಿವನಲ್ಲ
 ನಾದವ ಮಾಡಿದ ರಾವಣಂಗೆ ಅರೆಯಾಯುಷವಾಯ್ತು
 ವೇದವನೋದಿದ ಬ್ರಹ್ಮನ ಶಿರಹೋಯ್ತು
 ನಾದಪ್ರಿಯನೂ ಅಲ್ಲ ವೇದಪ್ರಿಯನೂ ಅಲ್ಲ
 ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ!
                                                -ಬಸವಣ್ಣ
 

ಶಿವನನ್ನು ನಾದಪ್ರಿಯ ಮತ್ತು ವೇದಪ್ರಿಯ ಅನ್ನುತ್ತಾರೆ,ಆದರೆ ನಾದಪ್ರಿಯ ಮತ್ತು ವೇದಪ್ರಿಯ ಶಿವ ಅಲ್ಲ.
ರಸವತ್ತಾದ ರಾಗ ನುಡಿಸಿದ ರಾವಣ ತನ್ನ ಪೂರ್ತಿ ಜೀವಿತಾವಧಿಯನ್ನು ಜೀವಿಸಲು ಸಾಧ್ಯ ಆಗಲಿಲ್ಲ.. ಅದೇ ರೀತಿ ಎಲ್ಲ ವೇದಗಳನ್ನು ಅಧ್ಯಯನ ಮಾಡಿದ ಬ್ರಹ್ಮ ತನ್ನ ತಲೆಯನ್ನು ಕಳೆದು ಕೊಳ್ಳಬೇಕಾದ ಪರಿಸ್ಥಿತಿ ಬಂದಿತ್ತು.. 
ಆದರೆ ಕೂಡಲಸಂಗಮ ದೇವನು ನಾದಪ್ರಿಯನೂ ಅಲ್ಲ,ವೇದಪ್ರಿಯನೂ ಅಲ್ಲ.. ಅವನು ಭಕ್ತಿ ಪ್ರಿಯನು.ತನಗೆ ಭಕ್ತಿ ತೋರಿಸುವವರನ್ನು ರಕ್ಷಿಸುತ್ತಾನೆ,ಇಡಿ ಜೀವ ಸಂಕುಲವನ್ನು ರಕ್ಷಿಸುತ್ತಾನೆ ಎಂದು ಬಸವಣ್ಣನವರು ಹೇಳುತ್ತಾರೆ...... ಇಲ್ಲಿ ಭಕ್ತಿಯ ಪ್ರಾಮುಖ್ಯತೆಯನ್ನು ವಿವರಿಸುತ್ತಾರೆ.



No comments:

Post a Comment