Monday 27 February 2012

ವಚನ ಸಿಂಚನ ೨೬:ಶಿವ,ಪ್ರೇತ

ಜಲವಿಲ್ಲದ ಕೆರೆ,ಫಲವಿಲ್ಲದ ಬನ,ಭಕ್ತನಿಲ್ಲದ ಗ್ರಾಮ
ಸುಡುಗಾಡಯ್ಯಾ,
ಅಲ್ಲಿ ಶಿವನಿಲ್ಲ,
ಪ್ರೇತ ಜಡಾರಣ್ಯದಲ್ಲಿ
ಹೋಗಬಹುದೇ
ಗುಹೇಶ್ವರಾ ?
               -ಅಲ್ಲಮಪ್ರಭು

ಇಲ್ಲಿ ನೀರಿಲ್ಲದ ಕೆರೆ,ಫಸಲು ಇಲ್ಲದ ಬನ,ಭಕ್ತನಿಲ್ಲದ ಉರು ಇವುಗಳನ್ನು ಅಲ್ಲಮಪ್ರಭು ದೇವರು ಸುಡುಗಾಡಿಗೆ ಹೋಲಿಸುತ್ತಾ ಅಲ್ಲಿ ಶಿವನಿಲ್ಲ ಎಂದು ಹೇಳುತ್ತಾರೆ..ಇಲ್ಲಿ ಸುಡುಗಾಡು ಅಂದರೆ ಆಚಾರ,ವಿಚಾರ,ನೈತಿಕತೆ,ನಡೆ ನುಡಿ,ವಿನಯವಂತಿಕೆ,ಭಕ್ತಿ ಪರವಶತೆ  ಇಲ್ಲದ ಜನರಿರುವ ಉರು ಎಂದು ಭಾವಿಸಬಹುದು.. ಇಲ್ಲಿ ಭಕ್ತನಿಲ್ಲ ಅಂದರೆ ಹರ ನಿಂದೆ ಗುರು ನಿಂದೆ ಮಾಡುವವರನ್ನು ಹಾಗೆ ಕರೆದಿರಬಹುದು...ಇಂಥ ಉರಿನಲ್ಲಿ ಶಿವನ ಕೃಪೆ ಇರುವುದಿಲ್ಲ ಎಂದು ಹೇಳುತ್ತಾ ಪ್ರೇತವು ಜಡಾರಣ್ಯದಲ್ಲಿ ಹೋಗದೆ ಇಂಥ  ಊರಿನಲ್ಲೇ ಸುತ್ತುತ್ತದೆ ಎಂದು ಹೇಳುತ್ತಾರೆ..ಇಲ್ಲಿ ಪ್ರೇತ ಅಂದರೆ  ಅಂತರಂಗ ಬಹಿರಂಗ ಶುದ್ಧಿ ಇಲ್ಲದ ಕೆಟ್ಟ ಮನಸ್ಸಿನ ವ್ಯಕ್ತಿತ್ವ ಎಂದು ಪರಿಗಣಿಸಬಹುದು.. 

No comments:

Post a Comment