Tuesday 21 February 2012

ವಚನ ಸಿಂಚನ ೨೫:ಇಂದು ನಾಳೆಗೆ

ಹೊನ್ನಿನೊಳಗೊಂದೆರೆಯ ಸೀರೆಯೊಳಗೊಂದೆಳೆಯ
ಇಂದಿಂಗೆ ನಾಳಿಂಗೆ ಬೇಕೆಂದೆನಾದಡೆ ನಿಮ್ಮಾಣೆ,
ನಿಮ್ಮ ಪ್ರಮಥರಾಣೆ,ನಿಮ್ಮ ಶರಣರಿಗಲ್ಲದೆ
ಮತ್ತೊಂದನರಿಯ ಕೂಡಲಸಂಗಮದೇವಾ !!!
                                             -ಬಸವಣ್ಣ

ಇಲ್ಲಿ ಬಸವಣ್ಣನವರು ಮನುಷ್ಯ ಸಹಜ ಆಸೆ ಮತ್ತು ಮನಸ್ಥಿತಿಯ ಬಗ್ಗೆ ಹೇಳುತ್ತಾ ನಾಳೆಗೆ ಕೂಡಿ ಇಡುವ ಬುದ್ಧಿ ಮಾನವನಿಗೆ ಇರಬಾರದು ಎಂದು ಹೇಳುತ್ತಾರೆ..ಹೊನ್ನಿನಲ್ಲಿ ಒಂದಿಷ್ಟನ್ನು ಬೇಡುವ ಅಥವಾ ಉಡುವ ಬಟ್ಟೆಯಲ್ಲಿ ಇನ್ನಷ್ಟು ಹೆಚ್ಚಿಗೆ ಅಪೇಕ್ಷಿಸಿದೆ  ಆದರೆ ನಿಮ್ಮ ಮೇಲೆ ಆಣೆ ಮಾಡುವುದಾಗಿ ದೇವರಲ್ಲಿ ಕೇಳಿಕೊಳ್ಳುತ್ತಾರೆ..ಶರಣಾದಿ  ಪ್ರಮಥರಿಗಲ್ಲದೆ ಬೇರೆಯದನ್ನು ತಿಳಿಯುವುದಿಲ್ಲ ಎನ್ನುತ್ತಾರೆ.
ತನ್ನ ಪತಿರಾಯ ಲಕ್ಕಯ್ಯ ತಮ್ಮ ಅವಶ್ಯಕತೆಗಿಂತ ಜಾಸ್ತಿ ಅಕ್ಕಿಯನ್ನು ಆಯ್ದು ತಂದಾಗ ಮಾರಮ್ಮ "ಈಸಕ್ಕಿ ಅಸೆ ನಿಮಗೇಕೆ ?" ಎಂದು ಪ್ರಶ್ನಿಸಿ ಹೆಚ್ಚಿಗೆ ಇದ್ದ ಅಕ್ಕಿಯನ್ನು ಪುನಃ ಅಲ್ಲಿಯೇ ಬಿಟ್ಟು ಬರುವಂತೆ ಹೇಳುವ ವಚನ ಕೂಡ ಈ ವಚನಕ್ಕೆ ಸಾಂಧರ್ಭಿಕವಾಗಿದೆ..

No comments:

Post a Comment