Tuesday 27 September 2011

ವಚನ ಸಿಂಚನ ೪: ಅಪರಾಧ

ಮನದೊಡೆಯ ಮಹಾದೇವ ಮಾನವ ನೋಡಿಹನೆಂದು
ಮನುಜರ ಕೈಯಿಂದ ಒಂದೊಂದು ನುಡಿಸುವನು
ಇದಕೆ ಕಳವಳಿಸದಿರು ಮನವೇ,ಕಾತರಿಸದಿರು ತನುವೆ,
ನಿಜವ ಮರೆಯದಿರು ಕಂಡ್ಯಾ ನಿಶ್ಚಿಂತವಾಗಿರು ಮನವೇ,
ಬಸವಣ್ಣ ಪ್ರಿಯ ಚೆನ್ನ ಸಂಗಯ್ಯನು
ಬೆಟ್ಟದನಿತಪರಾಧವನು  ಒಂದು ಬೊಟ್ಟಿನಲ್ಲಿ ತಾತೊಡುವೆನು....
                                                      ----------------ಅಕ್ಕ ನಾಗಮ್ಮ...


ಮಾಹಮನೆಯ ಮಾಹತಾಯಿ,ಕ್ರಾಂತಿಮಾತೆ,ಬಸವಣ್ಣನವರ ಸೋದರಿ ಅಕ್ಕ ನಾಗಮ್ಮ  ಮನಕ್ಕೆ ಮನವೇ ಸಾಕ್ಷಿಯಾಗಿ ನಡೆದವಳು,ಚನ್ನ ಬಸವಣ್ಣನ ಮಹಾಮಾತೆಯಾದ ಈಕೆಯು ಬಸವಣ್ಣನ ಸಾಧನೆಗೆ ಕಾರಣಳು.ತನಗೆ ದೊರೆತಿದ್ದ ಸಾಮಾಜಿಕ ಅಪರಾಧಗಳನ್ನು ಒಮ್ಮನಸ್ಸಿನಿಂದ ಚನ್ನ ಸಂಗಯ್ಯನಿಗೆ ಅರ್ಪಿಸಿದಳು.ಆತನು ಬೆಟ್ಟದಂತಹ ಅಪರಾಧವನ್ನು ಒಂದು ಬೊಟ್ಟಿನಲ್ಲಿ ತಾ ಕಳೆಯುವನು ಎಂಬ ಧೃಢ ನಂಬಿಕೆ  ಇವಳದು...

1 comment:

  1. ಗಿರೀಶ್ ಅಕ್ಕ ನಾಗಮ್ಮನವರ ಬಗ್ಗೆ ಕೇಳಿದ್ದೆ ಆದರೆ ಇವರ ಕೃತಿ ಅಥವಾ ವಚನ ಕೇಳಿರಲಿಲ್ಲ... ನಿಮ್ಮ ಬ್ಲಾಗ್ ಈ ಪರಿಚ್ಾಯವನ್ನೂ ಮಾಡಿಸಿದೆ...ಧನ್ಯವಾದ.

    ReplyDelete