Friday 23 September 2011

ವಚನ ಸಿಂಚನ ೩ : ಭಕ್ತಿಯ ಪರಾಕಾಷ್ಟೆ


ಅರಸಬ ಭಕ್ತಿ ಅಹಂಕಾರದಲ್ಲಿ ಹೋಯಿತು,
ಬ್ರಾಹ್ಮಣನ ಭಕ್ತಿ ಮುಟ್ಟು ತಟ್ಟಿನಲ್ಲಿ ಹೋಯಿತು,
ಶೀಲವಂತನ ಭಕ್ತಿ ಪ್ರಪಂಚಿನಲ್ಲಿ ಹೋಯಿತು,
ಸೆಟ್ಟಿಯ ಭಕ್ತಿ ವ್ಯಾಪಾರದಲ್ಲಿ ಹೋಯಿತು,
ನೀವು ಕೇಳಿರೋ ಇಂಥವರ ಭಕ್ತಿಗೆ ಊರಿಂದ 
ಹೊರಗಣ ಡೊ೦ಬನೇ ಸಾಕ್ಷಿ ಕಾಣಾ ಕಲಿ ದೇವರ ದೇವಾ !!!
                                              -ಮಡಿವಾಳ ಮಾಚಿದೇವ

ಪ್ರಾಪಂಚಿಕ ವಿಷಯಾಭಿಲಾಷೆಯನ್ನು ಹೊಂದಿ,ತೋರುವ ಭಕ್ತಿಯನ್ನು ಇಲ್ಲಿ ವಿಡ೦ಭಿಸಿದ್ದಾರೆ.ಸರ್ವ ಸಂಪತ್ತಿಗೆ ಒಡೆಯನಾದ ರಾಜನ ಭಕ್ತಿ ಗರ್ವದಲ್ಲಿ ಹಾಳಾಯಿತು.ಬ್ರಾಹ್ಮಣನ ಭಕ್ತಿ ಮಾಡಿ ಮೈಲಿಗೆಗಳ ಅವಾಂತರದಲ್ಲಿ ನಷ್ಟವಾಯಿತು.ಶೀಲವಂತನ ಭಕ್ತಿ ಲೌಕಿಕ ಸುಖದಲ್ಲೇ ಲೀನವಾದ ಸಂಸಾರದಲ್ಲಿ ಸೇರಿ ಹೋಯಿತು.ಶೆಟ್ಟಿಯ ಭಕ್ತಿಯು ಲೋಭ ಬುದ್ದಿಯಂದ ಕೂಡಿದ ವಂಚಕತನದ ವ್ಯಾಪಾರದಲ್ಲಿ ಕೂಡಿ ಹೋಗಿತ್ತು.ನೀವು ಕೇಳಿರೋ ಇಂಥವರ ಡಾಂಭಿಕ ಭಕ್ತಿಗೆ ಗಣೆಯ ಮೇಲೆ ನಿಂತು ದೊಂಬರಾಟ ಆಡುವ ಡೊ೦ಬನೇ ಸಾಕ್ಷಿ ಕಾಣಾ ಕಲಿ ದೇವರ ದೇವಾ.
ದೈವ ಭಕ್ತಿಗೆ ಅಹಂಕಾರ ಸಲ್ಲದ ವಿಚಾರ,ಮಾಡಿ ಮೈಲಿಗೆಗಳ ಭಾವ,ಭಕ್ತನಿಗೆ ಸಲ್ಲದ್ದು,ದೇವನಿಗೂ ಒಲ್ಲದ ವಿಚಾರ ಅದು ಎಂಬ ಅರ್ಥವನ್ನು  ಈ ವಚನದಲಿ ಕಾಣಬಹುದು...

No comments:

Post a Comment