Thursday 22 September 2011

ವಚನ ಸಿಂಚನ ೨: ಆಸೆ

ಅಂಗಕ್ಕೆ ಬಡತನವಲ್ಲದೆ  ಮನಕ್ಕೆ ಬಡತನವುಂಟೇ?
 ಬೆಟ್ಟ ಬಲ್ಲಿತ್ತೆ೦ದಡೆ,ಉಳಿಯ ಮೊನೆಯಲ್ಲಿ ಬಡತನವಿದ್ದಡೆ  ಒಡೆಯದೆ?
 ಘನ ಶಿವಭಕ್ತರಿಗೆ ಬಡತನವಿಲ್ಲ ,ಸತ್ಯರಿಗೆ ದುಷ್ಕರ್ಮವಿಲ್ಲ,
 ಎನಗೆ ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವುಳ್ಳನ್ನಕ್ಕ
 ಆರ ಹಂಗಿಲ್ಲ ಮಾರಯ್ಯ !!!
                               -ಆಯ್ದಕ್ಕಿ ಲಕ್ಕಮ್ಮ


ಅತಿಯಾಸೆ ಇಲ್ಲದಿದ್ದರೆ ಮನಸ್ಸು ಯಾವಾಗಲು ಶ್ರೀಮಂತಿಕೆಯನ್ನು ಅನುಭವಿಸುತ್ತದೆ.ಬೆಟ್ಟ ಬೃಹತ್ತಾಗಿರಬಹುದು.ಉಳಿಯ ಮೊನೆಗೆ ಬಡತನವಿದ್ದೀತೆ?
 ಸತ್ಪಾತ್ರನನ್ನು ದುಷ್ಕರ್ಮಿಗಳು ಕಾಡುವುದಿಲ್ಲ.ಘನ ಭಕ್ತರಿಗೆ ಬಡತನವಿಲ್ಲ.ಮಾರಯ್ಯ ಪ್ರಿಯ ಅಮಲೇಶ್ವರ ಲಿಂಗವನ್ನು ನಂಬಿರುವಾಗ ಅನ್ಯರ ಹಂಗು ನಮಗಿಲ್ಲ....

No comments:

Post a Comment