Wednesday 5 October 2011

ವಚನ ಸಿಂಚನ ೫:ಮನದ ಮೊನೆ

ಸಮುದ್ರ ಘನವೆ೦ಬೆನೆ ? ಧರೆಯ ಮೇಲಡಗಿತ್ತು,
ಧರೆ ಘನವೆ೦ಬೆನೆ ? ನಾಗೇಂದ್ರನ ಫಣಾಫಣಿಯ ಮೇಲಡಗಿತ್ತು,
ನಾಗೇಂದ್ರ ಘನವೆ೦ಬೆನೆ ? ಪಾರ್ವತಿಯ ಕಿರು ಬೆರಳ ಕುಣಿಕೆಯ ಮುದ್ರಿಕೆಯಾಗಿತ್ತು,
ಅಂತಹ ಪಾರ್ವತಿ ಘನವೆ೦ಬೆನೆ ? ಪರಮೇಶ್ವರನ ಅರ್ಧಾಂಗಿಯಾದಳು,
ಅಂತಹ ಪರಮೇಶ್ವರ ಘನವೆ೦ಬೆನೆ ? ನಮ್ಮ ಕೂಡಲ ಸಂಗನ ಶರಣರ
ಮನದ ಮೊನೆಯ ಮೇಲಡಗಿದನು !!!
                                               -ಬಸವಣ್ಣ
 
ಈ ವಚನದಲ್ಲಿ ಶರಣ ಶ್ರೇಷ್ಠತೆಯ ಹೊಳಹಿದೆ.ದೇವನಿಗಿಂತ ಜಂಗಮ ಶ್ರೇಷ್ಠ ದೊಡ್ಡದು,ಸಮುದ್ರ ಬಹು ಘನವಾದುದು ಎನ್ನಲು ಅದು ಹೂಮಿಯನ್ನೇ ಅವಲಂಬಿಸಿದೆ.
ಈ ಭೂಮಿಯೇ ದೊಡ್ಡದು ಎನ್ನಲು ಆದಿಶೇಷನು ಅದನ್ನು ಹೊತ್ತಿದ್ದಾನೆ,ಆ ಆದಿಶೇಷನೆ ಘನಮಹಿಮ ಎನ್ನಲು ಅದು ಪಾರ್ವತಿಯ ಕಿರು ನೆರಳಿನ ಉಂಗುರಕ್ಕೆ ಮುದ್ರಿಕೆಯಾಗಿದೆ,ಪಾರ್ವತಿಯೇ ಘನವೆನ್ನಲು ಅವಳು ಪರಮೇಶ್ವರನ ಅರ್ಧಾಂಗಿಯಾದಳು.ಪರಮೇಶ್ವರನೆ ಘನವೆನ್ನಲು ಅವನು ಶರಣರ ಮನದ ಮೊನೆಯಲ್ಲಿ ಹುದುಗಿದನು, ಶರಣರ ಹೃದಯದಲ್ಲಿ ಆಶ್ರಯ ಬೇಡಿದನು,ಇಂತಹ ಭಾವನ ಮೊಳೆತ್ತದ್ದರಿಂದಲೇ "ಎನಗಿಂತ ಕಿರಿಯರಿಲ್ಲ,ಶಿವ ಭಕ್ತರಿಗಿಂತ ಹಿರಿಯರಿಲ್ಲ" ಎಂದು ನುಡಿದು ವಿನಯಶೀಳರಾದರು,ಜಂಗಮ ನಿಷ್ಟರಾದರು ಬಸವಣ್ಣನವರು.

No comments:

Post a Comment