Tuesday 18 October 2011

ವಚನ ಸಿಂಚನ ೭:ದಯೆ

ದಯವಿಲ್ಲದ ಧರ್ಮವೆದೇವುದಯ್ಯಾ ?
ದಯವೇ ಬೇಕು ಸಕಲ ಪ್ರಾಣಿಗಳೆಲ್ಲರಲ್ಲಿಯೂ,
ದಯವೇ ಧರ್ಮದ ಮೂಲವಯ್ಯ,
ಕೂಡಲ ಸಂಗಯ್ಯನಂತಲ್ಲ ದೊಲ್ಲನಯ್ಯಾ.
                                                     -ಬಸವಣ್ಣ

ಮನುಷ್ಯನ ಸುಖ ಜೀವನಕ್ಕೆ ದಯೆ,ಕರುಣೆ ,ಅನುಕಂಪ ಇವೆಲ್ಲ ಅವಶ್ಯ..ವಿಶ್ವದ ಎಲ್ಲ ಧರ್ಮವೂ ಸಾರುವುದು ಶಾಂತಿ ಮತ್ತು ದಯೆಯನ್ನು..ಎಲ್ಲ ಧರ್ಮದ ತಳಹದಿ ದಯೆ..ಮಾನವೀಯತೆಯ ಹುಟ್ಟು ದಯಾಮಯವಾದ ಮನಸ್ಸಿನಿಂದ ಮಾತ್ರ ಸಾಧ್ಯ..ಜಗತ್ತಿನ ಎಲ್ಲ ಜೀವನಾಡಿಗಳಲ್ಲೂ ದಯೆ ಎಂಬ ಅಂತಃ ಕರಣ ಇರಬೇಕು ಎಂದು ಬಸವಣ್ಣನ ಆದಿಯಾಗಿ ಎಲ್ಲ ಶರಣರೂ  ಹೇಳುತ್ತಾರೆ...ದಯೆಯೇ ಧರ್ಮದ ಮೂಲ ಎಂದು ಹೇಳುವ ಬಸವಣ್ಣ ದಯೆ ಇಲ್ಲದ ಧರ್ಮ ವಿನಾಶಕಾರಿಯಾದದ್ದು ಎಂದು ಅಭಿಪ್ರಾಯ ಪಡುತ್ತಾರೆ...ಸಮಾನತೆಯ ಸಾರವನ್ನು ಸಾರಿದ ಬಸವಣ್ಣನ ಕೃತಿಯ ಮೂಲ ಕೂಡ ದಯೆ ಎಂದರೆ ತಪ್ಪಾಗಲಾರದು...

No comments:

Post a Comment