Tuesday 11 October 2011

ವಚನ ಸಿಂಚನ ೬:ದೇವಾಲಯ

ಉಳ್ಳವರು ಶಿವಾಲಯ ಮಾಡುವರು,
ನಾನೇನ ಮಾಡುವೆ ಬಡವನಯ್ಯ,
ಎನ್ನ ಕಾಲೇ ಕಂಭ ದೇಹವೇ ದೇಗುಲ
ಶಿರವೇ ಹೊನ್ನ  ಕಳಶವಯ್ಯಾ,
ಕೂಡಲ ಸಂಗಮದೆವಯ್ಯ ಕೇಳಯ್ಯಾ,
ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲ.
                                              -ಬಸವಣ್ಣ

ದೇಹವನ್ನು ದೇವಾಲಯಕ್ಕೆ ಹೋಲಿಸಿ ಪ್ರತಿಯೊಂದು ದೇಹವನ್ನು ಸಾಕ್ಷಾತ್ಕಾರಗೊಳಿಸಿದ ವಚನ ಇದು..ಎಲ್ಲ ಜಾತಿ ಧರ್ಮವನ್ನು ಮೀರಿ ಪ್ರತಿಯೊಬ್ಬರೂ ಪ್ರವೇಶ ನೀಡಿ ಅಧ್ಯಾತ್ಮ ಸುಖವನ್ನು ಅನುಭವಿಸಬಹುದಾದ ದೇವಾಲಯ ಇದು..ಇದು ಬಸವಣ್ಣನ ಮಹಾ ಕಲ್ಪನೆ...ತನ್ನ ಕಾಲೇ ದೇವಾಲಯದ ಕಂಭವಿದ್ದ  ಹಾಗೆ,ತನ್ನ ಶಿರಸ್ಸು ಕಳಸದ ಪ್ರತಿರೂಪ ಎಂದು ಹೇಳುವ ಬಸವಣ್ಣನ  ಪ್ರಕಾರ ದೇವರು ಅಂದರೆ ಸತ್ಯ,ಧರ್ಮದಿಂದ ಕೂಡಿದ ನಮ್ಮ ಜೀವ..ಇಂಥ ದೇವಾಲಯವು ಜಂಗಮ ಸ್ವರೂಪವೂ ಹೌದಾದ್ದರಿಂದ ಇದಕ್ಕೆ ಅಳಿವಿಲ್ಲ ಎಂದು ಹೇಳುತ್ತಾರೆ.....

ಅಲ್ಲದೆ ಈ ವಚನದಲ್ಲಿ ದೇವಾಲಯಗಳನ್ನು  ನಿರ್ಮಿಸುವ ಶ್ರೀಮಂತರು ಆಢಂಭರದ ಪ್ರತಿರೂಪ,ಅದು ಶಿವನಿಗೆ ಅರ್ಪಿತವಲ್ಲ..ಅದು ತೋರ್ಪಡಿಕೆಗೆ ಮಾಡುವ ಕೆಲಸ ಎಂದು ಹೇಳುತ್ತಾ ಅಂಥ ಸ್ಥಾವರಕ್ಕೆ ಅಳಿವಿದೆ ಎಂದು ಹೇಳುತ್ತಾರೆ...ದೇವಾಲಯಗಳ ನಿರ್ಮಾಣಕ್ಕೆ ಶರಣರ ವಿರೋಧ ಈ ವಚನದಲ್ಲಿ ಎದ್ದು ಕಾಣುತ್ತದೆ."ದೇಹವೇ ದೇವಾಲಯ" ಎಂದು ಸಾರಿದ ಬಸವಣ್ಣನ ಅನುಭವ ಚಿಂತನೆ ಇಲ್ಲಿ ಕಾಣಬಹುದು...

 
 

1 comment:

  1. good one....
    me looking for good litretures ...
    shivrajkoti@gmail.com

    ReplyDelete