Monday 24 October 2011

ವಚನ ಸಿಂಚನ ೮:ಎಲ್ಲೆಲ್ಲೂ ನೀನೇ ತುಂಬಿ

ವಚನದಲ್ಲಿ ನಾಮಾಮೃತ ತುಂಬಿ
ನಯನದಲ್ಲಿ ನಿಮ್ಮ ಮೂರುತಿ ತುಂಬಿ,
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ
ಕೂಡಲ ಸಂಗಮ ದೇವಾ !
ನಿಮ್ಮ ಚರಣ ಕಮಲದಲ್ಲಾನು ತುಂಬಿ.
                                    -ಬಸವಣ್ಣ

ನನ್ನ ಪ್ರತಿಯೊಂದು ಮಾತಿನಲ್ಲೂ ಅಮೃತವಾಣಿಯಂಥ ನಿನ್ನ ನಾಮವು ತುಂಬಿರಲಿ..ನನ್ನ ಕಣ್ಣುಗಳ ತುಂಬಾ ನಿನ್ನ ರೂಪವಂತವಾದ ಮೂರ್ತಿ ತುಂಬಿರಲಿ...ನನ್ನ ಕಿವಿಯಲ್ಲಿ ಸದ್ದ ನಿನ್ನ ಘನವಾದ ಕೀರ್ತಿ ತುಂಬಿರಲಿ...ನನ್ನ ಮನದಲ್ಲಿ ಸದಾ ನಿನ್ನ ನೆನಪುಗಳೇ ತುಂಬಿರಲಿ ಎಂದು ಕೂಡಲಸಂಗಮ ದೇವನಲ್ಲಿ ಭಿನ್ನಹಿಸುತ್ತಾ ಬಸವಣ್ಣ ಅರಿವಿನ ಸಂಕೇತವಾದ ನಿನ್ನ ಪಾದದಲ್ಲಿ ನಾನು ತುಂಬಿರುವಂತೆ ಮಾಡು ಎಂದು ಕೇಳುತ್ತಾ ಸದಾ ನಿಮ್ಮ ಸೇವೆ ಮಾಡುತ್ತೇನೆ ಎಂದು ಹೇಳುತ್ತಾರೆ...

No comments:

Post a Comment