Monday 2 July 2012

ವಚನ ಸಿಂಚನ ೪೩:ಸುಜ್ಞಾನವೆಂಬ ಕರ ತೇಜ

ಕಸವಕೊಂಡು ಹೊಸ ಧಾನ್ಯವ ಕೊಟ್ಟಡೆ,ಒಲ್ಲೆಂಬ ಚದುರರಾರು..
ಜಲವ ಕೊಂಡು ಅಮೃತವ ಕೊಟ್ಟಡೆ,ಒಲ್ಲೆಂಬ ಭಾಷೆಯದಾರದು?
ಎನ್ನಂತರಂಗದ ಜ್ಞಾನವಕೊಂಡು ಸುಜ್ಞಾನವಪ್ಪ
ನಿಮ್ಮ ಕರ ತೇಜವ ಕೊಟ್ಟಡೆ
ಒಲ್ಲೆನೆಂಬ ಪಾತಕಿ ಯಾರು?
ಕಪಿಲಸಿದ್ಧಮಲ್ಲಿಕಾರ್ಜುನ ಮಡಿವಾಳ ತಂದೆ....
                         -ಸಿದ್ಧರಾಮೇಶ್ವರ

ಜೀವನದಲ್ಲಿ ಯಾರೇ ಆದರು ದುರಾವಸ್ಥೆಯಲ್ಲಿರುವ ವಸ್ತುವನ್ನು ಕೊಟ್ಟು ಅದಕ್ಕಿಂತ ಚೆನ್ನಾಗಿರುವ ಭೋಗ ವಸ್ತುವನ್ನು ಪಡೆಯಲು ಒಲ್ಲೆ ಎನ್ನುವುದಿಲ್ಲ,ಅಂತ ವ್ಯಕ್ತಿಗಳನ್ನು ಇಲ್ಲಿ ಸಿದ್ದರಾಮಣ್ಣ ಚತುರರು ಎಂದು ಹೇಳುತ್ತಾ ಕೆಲವು ನಿದರ್ಶನಗಳನ್ನು ಕೊಟ್ಟು ತನ್ನನ್ನು ಕೂಡ ಪಾತಕಿ ಎಂದು ಹೇಳಿಕೊಳ್ಳುತ್ತಾನೆ.ಕಸವನ್ನು ಕೊಟ್ಟು ಅದಕ್ಕಿಂತ ಬೆಲೆ ಬಾಳುವ ಧಾನ್ಯವನ್ನು ಯಾವ ಚತುರನು ಕೂಡ ಬೇಡ ಅನ್ನುವುದಿಲ್ಲ,ಅದೇ ರೀತಿ ನೀರನ್ನು ಕೊಂಡು ಅಮೃತವನ್ನು ಕೊಟ್ಟರೆ ಕೂಡ ಅದನ್ನು ಪಡೆಯುತ್ತಾರೆ.ಈ ರೀತಿ ಇರಬೇಕಾದರೆ ತನ್ನ ಅಂತರಂಗದಲ್ಲಿರುವ ಜ್ಞಾನವನ್ನು ಪಡೆದು ಸುಜ್ಞಾನವಾಗಿರುವ ತಮ್ಮ ತೇಜೋಮಯ ವರ್ಚಸ್ಸನ್ನು ಕೊಟ್ಟರೆ ಒಲ್ಲೆ ಎನ್ನದ ಪಾತಕಿ ತಾನು ಎಂದು ಕಪಿಲ ಸಿದ್ಧ ಮಲ್ಲಿಕಾರ್ಜುನನಲ್ಲಿ ಹೇಳುತ್ತಾರೆ.ಅಂದರೆ ತಮ್ಮ ಜ್ಞಾನವನ್ನು ಕಸ ಮತ್ತು ನೀರಿಗೆ ಹೋಲಿಸುತ್ತಾ ಕಪಿಲಸಿದ್ಧಮಲ್ಲಿನಾಥನ ಸುಜ್ಞಾನವನ್ನು ಧಾನ್ಯ ಮತ್ತು ಅಮೃತಕ್ಕೆ ಹೋಲಿಸುತ್ತ ಸಿದ್ಧರಾಮೇಶ್ವರರು ಹೇಳುತ್ತಾರೆ ಅಂತ ಸುಜ್ಞಾನವನ್ನು ಕಸಿದುಕೊಳ್ಳುವ ಪಾತಕಿ ತಾನು ಎಂದು.

1 comment:

  1. ತುಂಬಾ ಒಳ್ಳೆಯ ವಚನ. ಚೆನ್ನಾಗಿದೆ ವಿವರಣೆ.

    ReplyDelete