Sunday 24 June 2012

ವಚನ ಸಿಂಚನ ೪೨:ಆತ್ಮ ಸಂಗಾತ

ಹಸಿವಾದರೆ ಊರೊಳಗೆ ಭಿಕ್ಷಾನ್ನಂಗಳುಂಟು,
ತೃಷೆಯಾದರೆ ಕೆರೆ ಬಾವಿ ಹಳ್ಳಂಗಳುಂಟು,
ಶಯನಕ್ಕೆ ಹಾಳುದೇಗುಲವುಂಟು,
ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು.
                                  -ಅಕ್ಕಮಹಾದೇವಿ

ಚನ್ನಮಲ್ಲಿಕಾರ್ಜುನನೇ ತನ್ನ ಗಂಡನೆಂದು ಭಾವಿಸಿ,ಆತನಿಗೆ ತನ್ನ ಭಕ್ತಿಯನ್ನು ಧಾರೆ ಎರೆದಿದ್ದ ಅಕ್ಕಮಹಾದೇವಿ ಈ ವಚನದಲ್ಲಿ ಕೂಡ ಚನ್ನಮಲ್ಲಿಕಾರ್ಜುನನ್ನು ತನ್ನ ಆತ್ಮ ಸಂಗಾತಕ್ಕೆ ಇದ್ದಾನೆ ಎಂದು ಹೇಳುತ್ತಾಳೆ.ಕೆಲವು ನಿದರ್ಶನಗಳ ಮೂಲಕ ತನಗೆ ಚನ್ನಮಲ್ಲಿಕಾರ್ಜುನ ಎಷ್ಟು ಅವಶ್ಯ ಮತ್ತು ಆತನಲ್ಲಿ ತಾನು ಭಕ್ತಿಯಲ್ಲಿ ಲೀನವಾಗಿರುವ ಬಗ್ಗೆ ವಿವರಿಸುತ್ತಾಳೆ.ಹಸಿವಾದರೆ ಊರಿನೊಳಗೆ ಹೋಗಿ ಯಾರ ಮನೆಯಲ್ಲಿ ಬೇಕಾದರೂ ಭಿಕ್ಷೆ ಬೇಡಿ ಹಸಿವು ನೀಗಿಸಿ ಕೊಳ್ಳಬಹುದು.ಅದೇ ರೀತಿ ಬಾಯಾರಿಕೆ ಆದರೆ ಬಾವಿ ಹಳ್ಳಗಳಲ್ಲಿ ನೀರು ತಂದು ನೀರಡಿಕೆ ನಿವಾರಿಸಬಹುದು.ನಿದ್ರಿಸಲು ಯಾವುದಾದರು ಹಾಲು ದೇವಾಲಯ ಕೂಡ ಸಾಕಾಗುತ್ತದೆ,ಆದರೆ ಆತ್ಮ ಸಂಗಾತಕ್ಕೆ ಚನ್ನಮಲ್ಲಿಕಾರ್ಜುನನೇ ಬೇಕು ಎಂದು ಹೇಳುವ ಮೂಲಕ ಆತನೇ ತನ್ನ ಗಂಡ ಎಂದು ಹೇಳಿಕೊಳ್ಳುತ್ತಾಳೆ ಅಕ್ಕ.

No comments:

Post a Comment