Monday 11 June 2012

ವಚನ ಸಿಂಚನ ೪೧ :ಸಂಬಂಧ

ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಯಬ್ದದಂತೆ
ಗುಹೇಶ್ವರ, ನಿಮ್ಮ ಶರಣಸಂಬಂಧ.
                            -ಅಲ್ಲಮಪ್ರಭು

ಈ ವಚನದಲ್ಲಿ ಶರಣ ಮತ್ತು ಲಿಂಗದ ನಡುವಿನ ಒಂದು ಅಗೋಚರವಾದ ಸಂಭಂದವನ್ನು ಕೆಲವು ನಿದರ್ಶನಗಳ ಮೂಲಕ ಅಲ್ಲಮಪ್ರಭು ಅವರು ವಿವರಿಸುತ್ತಾರೆ.ಕಲ್ಲಿನೊಳರಳಿದ ಶಿಲೆಯೊಳಗೆ ಬೆಂಕಿ ಅಡಗಿರುವಂತೆ,ಆ ಶಿಲೆಗಳು ಒಂದಕ್ಕೊಂದು ತಾಗಿದಾಗ ಬೆಂಕಿಯ ಕಿಡಿ ಬರುತ್ತದೆ,ಅದೇ ರೀತಿ ನಿಶ್ಚಲ ನೀರಿನೊಳಗೆ ಪ್ರತಿಬಿಂಬ ಗೋಚರಿಸಿದಂತೆ ಅಡಗಿರುವಂತೆ,ಒಂದು ಬೀಜವನ್ನು ಊಳಿದರೆ ಅದು ಬೆಳೆದು ಮರವಾಗುತ್ತದೆ, ಆ ಸಣ್ಣದೊಂದು ಬೀಜದೊಳಗಿನ ದಷ್ಟ ಶಕ್ತಿಯಂತೆ,ಶಬ್ದದೊಳಗೆ ಅಡಕವಾಗಿರುವ ನಿಶ್ಯಬ್ಧದಂತೆ ಲಿಂಗ ಮತ್ತು ಶಿವಶರಣನ ಸಂಭಂದವು ಗೋಚರಿಸದಂತೆ ಅಪ್ರಮಾನ್ಯವಾಗಿದೆ ಎಂದು ಹೇಳುತ್ತಾರೆ...

ಇದೆ ತರಹ ಗುಹೇಶ್ವರ ಲಿಂಗಕ್ಕೆಯು ಎನಗೆಯು ಎತ್ತಣಿಂದೆತ್ತ ಸಂಭಂದವಯ್ಯಾ ಎಂದು ಇನ್ನೊಂದು ವಚನದಲ್ಲಿ ಕೇಳಿಕೊಳ್ಳುವ ಪ್ರಶ್ನೆಗೆ ಈ ರೀತಿಯ ಅಗಮ್ಯ ಸಂಭಂದವೇ ಉತ್ತರ ಇರಬಹುದು...

No comments:

Post a Comment