Monday 7 May 2012

ವಚನ ಸಿಂಚನ ೩೬:ಶಿವಾನುಭಾವ

ಎನ್ನ ಘ್ರಾಣದಲ್ಲಿ ಆಚಾರಲಿಂಗ,
ಎನ್ನ ಜಿಹ್ವೆಯಲ್ಲಿ ಗುರುಲಿಂಗ,
ಎನ್ನ ನೇತ್ರದಲ್ಲಿ ಶಿವಲಿಂಗ,
ಎನ್ನ ತ್ವಕ್ಕಿನಲ್ಲಿ ಜಂಗಮಲಿಂಗ,
ಎನ್ನ ಶ್ರೋತ್ರದಲ್ಲಿ ಪ್ರಸಾದಲಿಂಗ,
ಎನ್ನ ಹೃದಯದಲ್ಲಿ ಮಹಾಲಿಂಗ,
ಎನ್ನ ಸ್ಥೂಲದೇಹದಲ್ಲಿ ಇಷ್ಟಲಿಂಗ,
ಎನ್ನ ಸೂಕ್ಷ್ಮದೇಹದಲ್ಲಿ ಪ್ರಾಣಲಿಂಗ,
ಎನ್ನ ಕಾರಣದೇಹದಲ್ಲಿ ಭಾವಲಿಂಗ,
ಕಪಿಲಸಿದ್ಧಮಲ್ಲಿಕಾರ್ಜುನನೆಂಬ ಚೆನ್ನಬಸವಣ್ಣ !!!
                      -ಸಿದ್ಧರಾಮೇಶ್ವರ

ಈ ವಚನದಲ್ಲಿ ಸಿದ್ದರಾಮಣ್ಣ ಶಿವಾನುಭಾವವನ್ನು ತಮ್ಮ ದೇಹದ ಮೂಲಕ  ಅನುಭವಿಸುವ ಬಗ್ಗೆ ವಿಶ್ಲೇಷಿಸುತ್ತಾರೆ.ಇಲ್ಲಿ ಭಕ್ತನೊಬ್ಬ  ತನ್ನ ಎಡಗೈಯಲ್ಲಿ ಇಷ್ಟ ಲಿಂಗವನ್ನು ಇಟ್ಟು ಪೂಜೆಗೆ  ಕೂರುವ ಭಂಗಿಯು ಲಿಂಗದ ಪೀಠದಂತೆಯೇ ಇರುತ್ತದೆ,ಆದ್ದರಿಂದ ಶಿವ ಭಕ್ತ ಕೂಡ ಶಿವನ ಸ್ವರೂಪವೆ ಆಗುತ್ತಾನೆ ಎಂದು ಈ ಮೂಲಕ ತಿಳಿಸುತ್ತಾ ಮನುಷ್ಯನದೇಹ ಕೂಡ ಲಿಂಗದಂತೆ ಎಂದು ಈ ವಚನದಲ್ಲಿ ಹೇಳುತ್ತಾರೆ.

ತನ್ನ ಪಂಚೇದ್ರಿಯಗಳಲ್ಲಿ ಗುರು,ಲಿಂಗ ,ಜಂಗಮ,ಪ್ರಸಾದ ಮತ್ತು ಭಕ್ತಿಯನ್ನು ಕಾಣಬಹುದು ಮತ್ತು ತನ್ನ ಭೌತಿಕ ಶರೀರವು ಇಷ್ಟಲಿಂಗದಂತೆ ಎಂದು ಹೇಳುತ್ತಾ,ತನ್ನ ಸೂಕ್ಷ್ಮ ದೇಹ ಅಂದರೆ ಆತ್ಮದಲ್ಲಿ ಪ್ರಾಣಲಿಂಗವಿದೆ ಮತ್ತು ಅವರ ಕಾರಣದೇಹ ಅಂದರೆ ಬುದ್ಧಿಯಮತ್ತು ಅನುಭವದಲ್ಲಿ ಭಾವಲಿಂಗವಿರುತ್ತದೆ ಎನ್ನುತ್ತಾರೆ..




2 comments:

  1. GOOD VACHANA OF SHARANA. EVERYBODY GO FOR SEARCHING GOD IN PILIGRIMAGE PLACES.BUT SHARANA SHOWED THAT GOD IS LAYING IN OUR BODY

    ReplyDelete
    Replies
    1. ನೀವು ಹೇಳುವುದು ಸರಿ ಇದೆ...ಶರಣರು ತಮ್ಮ ದೇಹದ ಮೂಲಕವೇ ದೇವರನ್ನು ಕಂಡು ಕೊಂಡಿದ್ದರು ಎಂಬುದಕ್ಕೆ ಇಂಥ ಹಲವಾರು ವಚನಗಳು ಸಾಕ್ಷಿ...

      Delete