Monday 24 December 2012

ವಚನ ಸಿಂಚನ ೫೮:ದೇವರೊಡನೆ ಸಂಭಂದ

ಅಯ್ಯಾ ನೀನು ನಿರಾಕಾರವಾಗಿರ್ದಲ್ಲಿ
ನಾನು ಜ್ಝಾನವೆ೦ಬ ವಾಹನವಾಗಿರ್ದೆ ಕಾಣಾ,
ಅಯ್ಯಾ ನೀನು ನಾಟ್ಯಕ್ಕೆ ನಿ೦ದಲ್ಲಿ
ನಾನು ಚೈತನ್ಯವೆ೦ಬ ವಾಹನವಾಗಿರ್ದೆ ಕಾಣಾ,
ಅಯ್ಯಾ ನೀನು ಆಕಾರವಾಗಿರ್ದಲ್ಲಿ
ನಾನು ವೃಷಭನೆ೦ಬ ವಾಹನವಾಗಿರ್ದೆ ಕಾಣಾ,
ಅಯ್ಯಾ ನೀನೆನ್ನ ಭವವ ಕೊ೦ದಿಹೆನೆ೦ದು
ಜ೦ಗಮ-ಲಾ೦ಛನನಾಗಿ ಬ೦ದಲ್ಲಿ
ನಾನು ಭಕ್ತನೆ೦ಬ ವಾಹನನಾಗಿರ್ದೆ
ಕಾಣಾ ಕೂಡಲಸ೦ಗಮದೇವಾ!!
                                   -ಬಸವಣ್ಣ

ಈ ವಚನದಲ್ಲಿ ಬಸವಣ್ಣ,ಶಿವ ಸ್ವರೂಪಿಯೂ ಪ್ರಣವ ಸ್ವರೂಪಿಯೂ ಆದ ಕೂಡಲಸಂಗಮನಿಗೂ ಇರುವ ಅವಿನಾಭಾವ ಸಂಭಂದ ಎಷ್ಟು ಭಕ್ತಿಯಿಂದ ಕೂಡಿದೆ ಎಂದು ವಿವರಿಸುತ್ತಾನೆ.

ದೇವರು ನಿರಾಕಾರ ಅನ್ನುತ್ತಾರೆ.ಶಿವನು ಅಂತ ನಿರಾಕಾರ ಸ್ಥಿತಿಯಲ್ಲಿದ್ದಾಗ ತಾನು ಜ್ಞಾನದ ಮೂಲಕ ದೇವರನ್ನು ಕೊಂಡೊಯ್ದು ಎಲ್ಲರನ್ನು ಬೆಸೆಯುವಂತೆ ಮಾಡುತ್ತೇನೆ ಎಂದು ಬಸವಣ್ಣ ಹೇಳುತ್ತಾ,ನಾಟ್ಯ ಪ್ರಿಯನೂ ಆದ ನಟರಾಜನಾದ ಶಿವನು ನಾಟ್ಯಕ್ಕೆ ನಿಂತಾಗ ತಾನು ಆ ನೃತ್ಯಕ್ಕೆ ಚೈತನ್ಯವನ್ನು ತುಂಬುತ್ತೇನೆ ಎಂದು ಹೇಳುತ್ತಾನೆ.ದೇವನು ಆಕರದಲ್ಲಿದ್ದಾಗ ತಾನು ನಂದಿಯಾಗಿ ತಮ್ಮನ್ನು ಕರೆದೊಯ್ಯುತ್ತೇನೆ ಎಂದು ಕೂಡಲಸಂಗಮನಲ್ಲಿ ಹೇಳಿಕೊಳ್ಳುತ್ತಾರೆ.
ಮುಂದುವರೆಯುತ್ತಾ,ನೀನೆನ್ನ ಭವವ ಕೊ೦ದಿಹೆನೆ೦ದು ಜ೦ಗಮ-ಲಾ೦ಛನನಾಗಿ ಬ೦ದಲ್ಲಿ,ಇಲ್ಲಿ ಎನ್ನ ಭವ ಅಂದರೆ ಎನ್ನ ಹುಟ್ಟು,ಎನ್ನ ಆಶಯ,ಎನ್ನ ಸೃಷ್ಟಿ ಎಂದೆಲ್ಲ ಅರ್ಥೈಸಬಹುದು.ಇವುಗಳನ್ನೆಲ್ಲ ನಾಶಪಡಿಸಿದ ಜಂಗಮ ರೂಪಿಯಾಗಿ ಬಂದರೆನನ್ನು ನಿನ್ನ ಭಕ್ತನಾಗಿ ನಿನ್ನನ್ನು ಮುನ್ನಡೆಸುತ್ತೇನೆ ಎಂದು ಕೂಡಲಸಂಗಮನಲ್ಲಿ ಹೇಳಿಕೊಳ್ಳುತ್ತಾನೆ.

ಇವೆಲ್ಲ ನಿದರ್ಶನಗಳಿಂದ ಬಸವಣ್ಣ ಭಗವಂತನೊಡನೆ ಸದಾ ಅವಿನಾಭಾವ ಸಂಭಂದವನ್ನು ನಾನ ರೀತಿಯಲ್ಲಿ ಹೊಂದಿರುವೆ ಎಂದು ಹೇಳುತ್ತಾರೆ.ಇದರಿಂದ ನಮಗೆ ಬಸವಣ್ಣನ ಭಕ್ತಿ ಎಂತಹುದು ಎಂದು ತಿಳಿಯುತ್ತದೆ


2 comments:

  1. ಭಕ್ತಿಯ ನಿಜವಾದ ಅರ್ಥವನ್ನು ನನಗೆ ಈ ವಚನ ತೋರಗೊಟ್ಟಿತು. ಬಸವಣ್ಣ ಶಿವನೆಡೆಗೆ ನಮ್ಮನ್ನು ಕೊಂಡೊಯ್ಯುವ ಚೇತನ.

    ReplyDelete
  2. saamaanyarannu sulabhavaagi muttuva
    basavannanavara vachana mattu
    saralavaada vvaranegaagi dhanyavaadagalu.

    ReplyDelete