Monday 14 January 2013

ವಚನ ಸಿಂಚನ ೫೯:ಆಸೆ-ಆಮಿಷ ಮತ್ತು ಭಕ್ತಿ

ಆಸೆಗೆ ಸತ್ತುದು ಕೋಟಿ !
ಆಮಿಷಕ್ಕೆ ಸತ್ತುದು ಕೋಟಿ !
ಹೊನ್ನು-ಹೆಣ್ಣು-ಮಣ್ಣಿಂದು ಸತ್ತುದು ಕೋಟಿ !
ಗುಹೇಶ್ವರ,
ನಿಮಗಾಗಿ ಸತ್ತವರನಾರನೂ ಕಾಣೆ
                                       -ಅಲ್ಲಮಪ್ರಭು


ಈ ವಚನದಲ್ಲಿ ಅಲ್ಲಮ ಪ್ರಭು ಮನುಷ್ಯ ಆಸೆಗಳ ಬೆನ್ನತ್ತಿ  ಹೋಗುವ ಅವನ ದುರ್ಭುದ್ದಿಯನ್ನು ವಿವರಿಸುತ್ತಾನೆ... ಮನುಷ್ಯ ಆಸೆ ಮತ್ತು ಪರನೊಬ್ಬ ನೀಡುವ  ಆಮಿಷಕ್ಕೆ ತನ್ನ ನೈತಿಕತೆ ಯನ್ನು ಕಳೆದು ಕೊಳ್ಳುತ್ತಿದ್ದಾನೆ.ಈ ರೀತಿ ಆಸೆ ಆಮಿಷಕ್ಕೆ ಬಲಿ  ಆದವರು ಕೋಟಿಗಟ್ಟಲೆ ಜನರು...ಇದೆ ರೀತಿ ಹೊನ್ನು,ಹೆಣ್ಣು,ಮಣ್ಣಿನ ಹಿಂದೆ ಹೋಗಿ ನೂರಾರು ಜನ ಬಲಿಯಾದರು.. ಈ  ವಚನದಲ್ಲಿ ಸತ್ತುದು ಕೋಟಿ ಅಂದರೆ ಮನುಷ್ಯನ ನೈತಿಕತೆ ,ಅವನ ಧರ್ಮ ಮತ್ತು ಸಂಸ್ಕಾರ ಎಂದು ಅರ್ಥೈಸಿಕೊಳ್ಳಬಹುದು... ಹೀಗೆ ಹೇಳುತ್ತಾ ಗುಹೇಶ್ವರನಲ್ಲಿ ನಿನಗಾಗಿ ಸತ್ತವರು ಒಬ್ಬರೂ ಇಲ್ಲ ಎಂದು ಹೇಳುತ್ತಾನೆ..ಅಂದರೆ ಇಲ್ಲಿ ಗುಹೇಶ್ವರನಲ್ಲಿ ಭಕ್ತಿಯನ್ನು ಅರಸಿಕೊಂಡು ಹೋದವನು ಒಬ್ಬನೂ ಇಲ್ಲ ಅಥವಾ ದೇವರನ್ನು ಕಂಡುಕೊಳ್ಳುವ ಪ್ರಯತ್ನವನ್ನು ಒಬ್ಬನೂ  ಮಾಡಲಿಲ್ಲ ಎಂದು ಅಲ್ಲಮ ವಿಷಾದ ವ್ಯಕ್ತ ಪಡಿಸುತ್ತಾನೆ...

ಅಂದರೆ ಈ ವಚನದಲ್ಲಿ ಅಲ್ಲಮ ಭಕ್ತಿಯ ಮಾರ್ಗದೆಡೆ ಹೋಗಿ ಎಂದು ವಿನಂತಿಸಿ ಕೊಳ್ಳುವ ಹಾಗೆ ಇದೆ...

ಹೆಣ್ಣು,ಹೊನ್ನು ,ಮಣ್ಣು ಇವುಗಳನ್ನು ಮಾಯೆ ಎಂದು ಹೇಳುತ್ತಾ ಇವೆಲ್ಲದಕ್ಕಿಂತ ಮನದ ಆಸೆಯೇ ಮಾಯೆ ಎಂದು  ಅಲ್ಲಮ  ತನ್ನಇನ್ನೊಂದು  ವಚನದಲ್ಲಿ ಹೇಳುತ್ತಾನೆ...ಇದೆ ರೀತಿ ಹಲವಾರು ವಚನಕಾರರು ಈ ಮೂರು ವಸ್ತುಗಳನ್ನು ತಮ್ಮ ವಚನದಲ್ಲಿ ಬಳಸಿಕೊಂಡಿದ್ದಾರೆ ಮತ್ತು ಇದಕ್ಕೆ ಸಮನಾದ ಭಾವವನ್ನೇ ಅವರುಗಳು ನೀಡಿದ್ದಾರೆ...

No comments:

Post a Comment