Monday 9 July 2012

ವಚನ ಸಿಂಚನ ೪೪:ಸಂಸಾರ ಶರಧಿ

ಕಾಲಲ್ಲಿ ಕಟ್ಟಿದ ಗುಂಡು,
ಕೊರಳಲ್ಲಿ ಕಟ್ಟಿದ ಬೆಂಡು,
ತೇಲಲೀಯದು ಗುಂಡು,
ಮುಳುಗಲೀಯದು ಬೆಂಡು,
ಇಂತಪ್ಪ ಸಂಸಾರ ಶರಧಿಯ ದಾಟಿಸಿ
ಕಾಲಾ೦ತಕನೆ ಕಾಯೋ,
ಕೂಡಲಸಂಗಮದೇವಾ !!!
                    -ಬಸವಣ್ಣ

ಇಲ್ಲಿ ಬಸವಣ್ಣನವರು ಸಂಸಾರವನ್ನು ಸಮುದ್ರಕ್ಕೆ ಹೋಲಿಸುತ್ತಾ ಅಂತ ಸಮುದ್ರವನ್ನು ದಾಟುವಾಗ ಬರುವ ಕಷ್ಟ ಕಾರ್ಪಣ್ಯಗಳನ್ನು ಬಹಳ ಸಮಯೋಚಿತವಾಗಿ ಈ ವಚನದಲ್ಲಿ ವಿವರಿಸುತ್ತಾರೆ.ಕಲ್ಲು ಗುಂಡು ನೀರಿನಲ್ಲಿ ಮುಳುಗುವ ವಸ್ತು,ಅದೇ ರೀತಿ ಬೆಂಡು ತೇಲುವ ವಸ್ತು.ಸಂಸಾರದಲ್ಲಿ ಒಂದು ಕಡೆ ಗುಂಡನ್ನು ಕಟ್ಟಿಕೊಂಡು ಇನ್ನೊಂದು ಕಡೆ ಬೆಂಡನ್ನು ಕಟ್ಟಿಕೊಂಡರೆ ಸಮತೋಲನ ಕಾಪಾಡುವುದು ಕಷ್ಟ.ಇಲ್ಲಿ ಕಲ್ಲು ಗುಂಡು ಮತ್ತು ಬೆಂಡು ಅಂದರೆ ಸಂಸಾರದಲ್ಲಿ ಬರುವ ಸುಖ ದುಃಖ ಅಥವಾ ಸರಸ ವಿರಸ ಅಥವಾ ಇಷ್ಟ ಕಷ್ಟದ ಗಳಿಗೆಗಳು ಎಂದು ಭಾವಿಸಬಹುದು.ಇಂತಿರುವ ಸಂಸಾರವೆಂಬ ಸಮುದ್ರದಲ್ಲಿ ಸುಖ ದುಃಖವನ್ನು ಸಮನಾಗಿ ಸಹಿಸುವ ಶಕ್ತಿಯನ್ನು ನೀಡುವವನು ನೀನೇ ದೇವಾ ಎಂದು ಶಿವ ಸ್ವರೂಪಿ ಕೂಡಲಸಂಗಮದೇವನಲ್ಲಿ ಹೇಳುತ್ತಾರೆ.

1 comment: