Sunday 15 April 2012

ವಚನ ಸಿಂಚನ ೩೩:ಬೆಳೆಯ ಭೂಮಿ

ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ
ತಿಳಿಯಲೀಯದು,ಎಚ್ಚರಲೀಯದು ಎನ್ನವ ಗುಣವೆಂಬ
ಕಸವ ಕಿತ್ತು ಸಲಹಯ್ಯಾ ಲಿಂಗತಂದೆ ಸುಳಿದೆಗೆದು
ಬೆಳೆವೆನು ಕೂಡಲಸಂಗಮದೇವಾ..
                                 -ಬಸವಣ್ಣ

ಈ ವಚನದಲ್ಲಿ ಬೆಳೆಯ ಭೂಮಿ ಅಂದರೆ ಮನುಷ್ಯನ ದೇಹ ಆಗಿರಬಹುದು ಅಥವಾ ಅವನ ಆವ ಭಾವ ಆಗಿರಬಹುದು.ಪ್ರಳಯದ ಕಸ ಹುಟ್ಟಿ ಅಂದರೆ ಕೆಟ್ಟ ಗುಣಗಳು ಅಥವಾ ದುರ್ಗುಣಗಳು ಎಂದು ಭಾವಿಸಬಹುದು.ಹುಟ್ಟಿನಿಂದ ಸ್ವಚ್ಚವಾಗಿದ್ದ ತನ್ನ ದೇಹ ಮತ್ತು ಮನಸ್ಸು ಎರಡೂ ತನಗೆ ತಿಳಿಯದಂತೆ ಕೆಟ್ಟ ಭಾವಗಳಿಂದ ತುಂಬಿ ಹೋಗಿದೆ ಎಂದು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತಾ ಆಧ್ಯಾತ್ಮಿಕ ನೆಲೆಯಲ್ಲಿರುವ ಈ ವಚನದಲ್ಲಿ ಬಸವಣ್ಣನವರು,ತನ್ನಲ್ಲಿರುವ ಅವಗುಣಗಳನ್ನು ಕಿತ್ತೊಗೆದರೆ ಹುಲುಸಾದ ಬೆಲೆಯನ್ನು ಬೆಳೆಯುವೆ ಎಂದು ಕೂಡಲಸಂಗಮದೇವನಲ್ಲಿ ಪ್ರಾರ್ಥಿಸಿಕೊಳ್ಳುತ್ತಾರೆ.

ಇಲ್ಲಿ ಸುಳಿದೆಗೆದು ಅಂದರೆ ಭಕ್ತಿಯ ಮಾರ್ಗದಲ್ಲಿ ಎಂದು ತಿಳಿಯಬಹುದು ಮತ್ತು ಬೆಳೆ ಅಂದರೆ ಆಧ್ಯಾತ್ಮಿಕ ಮತ್ತು ಸಾಮಾಜಿಕ ಚಿಂತನೆಗಳು.

No comments:

Post a Comment