Monday 11 February 2013

ವಚನ ಸಿಂಚನ ೬೨:ಮಡಿ ಮೈಲಿಗೆ ಮತ್ತು ಲಿಂಗ

ಆವವನಾದಡೇನು,
ಶ್ರೀ ಶಿವಲಿಂಗ ದೇವರು ಅಂಗದ ಮೇಲೆ ಉಳ್ಳವರ
ಬಾಯ ತಾಂಬೂಲ ಮೆಲುವೆನು,
ಬಿಲ್ಲುಡೆಯ ಹೊದೆವೆನು,
ಪಾದರಕ್ಷೆಯ ಕಾದು  ಬದುಕುವೆನು,
ನಮ್ಮ ಕೂಡಲಸಂಗಮದೇವ ಅಂಗದಿಂದ ತೊಲಗದೆ ನೆನೆವವರ...
                                         -ಬಸವಣ್ಣ

ಈ ವಚನದಲ್ಲಿ ಬಸವಣ್ಣ ಸಾಂಪ್ರದಾಯಿಕೆ ಮಡಿ ಮೈಲಿಗೆಗಳು  ಅರ್ಥಹೀನ ಎಂದು ಸ್ಪಷ್ಟಪಡಿಸುತ್ತಾರೆ..ಬಸವಣ್ಣನ ಪ್ರಕಾರ ದೈವ ಸಂಕೇತವೂ,ಸಮಾನತೆಯ ಸಂಕೇತವೂ ಆದ ಇಷ್ಟ ಲಿಂಗವನ್ನು ಧರಿಸಿದರೆ  ಅಂಥವನಿಗೆ ಈ ಮಡಿ ಮೈಲಿಗೆಗಳ ಜಂಜಾಟವಿಲ್ಲ ಎಂದು ಹೇಳುತ್ತಾರೆ...ಲಿಂಗ ಧರಿಸಿದವರೆಲ್ಲರು ಉಚ್ಚರು,ಯಾವುದೇ ಬೇಧ ಭಾವವಿಲ್ಲದ ಸಮಾನರು ಅವರು ಎಂದು ಪುಷ್ಟಿಕರಿಸುತ್ತಾ ಅವರಲ್ಲಿ ಯಾವುದೇ ಅಂತರವಿಲ್ಲ ಎಂದು ವಿವರಿಸಲು ಕೆಲವು ನಿದರ್ಶನಗಳನ್ನು ಕೊಡುತ್ತಾರೆ..

ಒಬ್ಬ ವ್ಯಕ್ತಿ ಅಗೆದ ತಾಂಬೂಲ ಇನ್ನೊಬ್ಬನಿಗೆ ಶುಚಿಕರವಲ್ಲ ಮತ್ತು ಅದು ಆತನ ಎಂಜಲು ಎಲ್ಲ ಬೇರೆತದ್ದರಿಂದ ಅದು ಮಲೀನವಾದದ್ದು.ಆದರ ಬಸವಣ್ಣ ಹೇಳುತ್ತಾರೆ ಲಿಂಗಧಾರಿಯೊಬ್ಬ ಅಗೆದು ಬಿಟ್ಟ ತಾಂಬೂಲವನ್ನು  ತಾನು ತಿನ್ನಲು ಸಿದ್ಧ ಎಂದು ಆತ ಅಸ್ಪ್ರುಶ್ಯನೆ ಆಗಿರಲಿ,ಕೆಳ ಜಾತಿಯವನೇ ಆಗಿರಲಿ ಆತ ಲಿಂಗಧಾರಿಯಾಗಿದ್ದರೆ ಆತನ ಬಾಯಿಂದ ತಾಂಬೂಲವನ್ನು  ತಿನ್ನಬಲ್ಲೆ ಅಂದರೆ, ಇಲ್ಲಿ ಎಂಜಲಾದರೇನು ಮಾನಸಿಕ ಶುಚಿರ್ಭೂತರಾದರೆ ಎಲ್ಲವೂ ಶ್ರೇಷ್ಠ  ಎಂದು ಬಸವ ಹೇಳಬೇಕಾದರೆ ಆತನ ಉದ್ದೇಶ ಈ ಮೈಲಿಗೆ ಸಂಪ್ರದಾಯವನ್ನು ಹೋಗಲಾಡಿಸುವುದು ಮತ್ತು ಅದನ್ನು ವಿರೋಧಿಸುವುದು...

 ಅದೇ ರೀತಿ ,ತಾನು ಇನ್ನೊಬ್ಬ ಉಟ್ಟು ಬಿಟ್ಟ ಮಲೀನವಾದ ಬಟ್ಟೆಯನ್ನು ಉಡಲು ಸಿದ್ಧ ಮತ್ತು ಬೇರೆಯವರ ಪಾದರಕ್ಷೆಗಳನ್ನು ಕಾದು ಜೀವನ ಮಾಡಬಲ್ಲೆ,ಅವರು ಯಾವ ಕುಲದವನೇ  ಆಗಿರಲಿ,ಅವರು ಲಿಂಗಧಾರಿಗಳಾಗಿದ್ದರೆ ಸಾಕು ಅವರೆಲ್ಲರೂ ಸಮಾನರು ಎಂದು ಹೇಳುತ್ತಾ ಇಷ್ಟಲಿಂಗವನ್ನು ಸಾಮಾಜಿಕ ಸಮಾನತೆಯ ಕುರುಹು ಎಂದು ಬಿಂಬಿಸುತ್ತಾರೆ.

ಲಿಂಗವನ್ನು ಅಂಗದಲ್ಲಿ ಧರಿಸುವವರು ಎಂದಿಗೂ ದೇವರಿಂದ ಬೇರ್ಪಡುವುದಿಲ್ಲ,ದೇವರೊಡನೆ ಬೆಸುಗೆ ಎಂದಿಗೂ ಇರುತ್ತದೆ,ಅಂಥವರ ಬಾಯಿಂದ ತಾಂಬೂಲವನ್ನು ಪಡೆಯಲು,ಅವರು  ಉತ್ತ ಬಟ್ಟೆಯನ್ನು ತೊಡಲು,ಅವರ ಪಾದರಕ್ಷೆಗಳನ್ನು ಕಾಯಲು ಸಿದ್ಧ,ಇಂಥ ಹೊಂದಾಣಿಕೆಗೆ ಇಳಿಯಲು ಸಿದ್ಧ ಎಂದು ಹೇಳುವ ಪರಿಭಾಷೆಯ ಹಿಂದೆ ಸಮಾನತೆಯ ಸಾರುವ ಉದ್ದೇಶ ಎದ್ದು ಕಾಣುತ್ತದೆ..
ಮತ್ತು ಇಲ್ಲಿ ಗಮನಿಸಬೇಕಾದ ಒಂದು ಅಂಶ ಎಂದರೆ,ಇಲ್ಲಿ ನೀಡಿರುವ ನಿದರ್ಶನಗಳಲ್ಲಿ ಉತ್ಕಟತೆ ಮತ್ತು ತೀಕ್ಷ್ಣತೆ ಒಂದಕ್ಕಿಂತ ಒಂದರಲ್ಲಿ ಹೆಚ್ಚುತ್ತಾ ಹೋಗುತ್ತದೆ..

 

No comments:

Post a Comment