Monday 24 September 2012

ವಚನ ಸಿಂಚನ ೫೧:ನಿರ್ವಾಣ

 
ಮಂಡೆ ಬೋಳಾಗಿ ಮೈ ಬೆತ್ತಲೆಯಾಗಿಪ್ಪವರ ಕಂಡರೆ
ನಿರ್ವಾಣಿಗಳೆಂಬೆನೆ ?ಎನ್ನೆನಯ್ಯಾ
ಅಖಂಡಿತವಾಗಿ ಮನ ಬೋಳಾಗಿ
ಭಾವ ಬೆತ್ತಲೆಯಾಗಿರಬಲ್ಲರೆ ಅದು
ನಿರ್ವಾಣವೆಂಬೆ ಕಾಣಾ
ಮಹಾಲಿಂಗಗುರು ಶಿವಸಿದ್ಧೆಶ್ವರ ಪ್ರಭುವೇ..
                    -ತೋಂಟದ ಸಿದ್ಧಲಿಂಗೇಶ್ವರರು

ಈ ವಚನದಲ್ಲಿ ತೋಂಟದ ಸಿದ್ಧಲಿಂಗೇಶ್ವರರು ನಿರ್ವಾಣಿಗಳು ಅಂದರೆ ಮೋಕ್ಷ ಪಡೆದವರ ಬಗ್ಗೆ ಹೇಳುತ್ತಾರೆ.ತಲೆ ಕೂದಲನ್ನು ಬೋಳಿಸಿಕೊಂಡು,ಬಟ್ಟೆ ಇಲ್ಲದೆ ಬೆತ್ತಲೆಯಾಗಿ ಓಡಾಡುವವರನ್ನು ನಿರ್ವಾಣಿಗಳೆಂದು ಕರೆಯಲು ಸಾಧ್ಯವಿಲ್ಲ.ಮನುಷ್ಯ ಜನ್ಮ ಪವಿತ್ರವಾದದ್ದು,ಸಾರ್ಥಕವಾದದ್ದು.ಅಂಥದ್ದರಲ್ಲಿ ಬೆತ್ತಲೆಯಾಗಿ ಓಡಾಡಿದರೆ ಅಡಿ ನಾಚಿಕೆಯ ಸಂಗತಿ ಅಲ್ಲದೆ ,ಮೋಕ್ಷದ ನಡಿಗೆಯಲ್ಲ.ಅಖಂಡಿತವಾಗಿ ಮನಸ್ಸು ಖಾಲಿಯಾಗಿ,ಮನಸಿನ ಸ್ಥಿತಿಗೆ ಸ್ವರೂಪ ಇಲ್ಲದಿದ್ದರೆ ಆತನನ್ನು ನಿರ್ವಾಣ ಎನ್ನಬಹುದು,ಆತ ಶೂನ್ಯ ಸಂಪಾದನೆ ಮಾಡಿದ್ದಾನೆ ಎನ್ನಬಹುದು ಎಂದು ಮಹಾಲಿಂಗಗುರು ಶಿವಸಿದ್ಧೇಶ್ವರನಲ್ಲಿ ಹೇಳುತ್ತಾರೆ...ಮನಸ್ಸು ಖಾಲಿಯಾಗಿ ಅಂದರೆ ಯಾವುದೇ ವಿಚಾರಗಳ ಬಗ್ಗೆ ಯೋಚನೆ ಇಲ್ಲದೆ ಎಂದು ತಿಳಿಯಬಹುದು..

ಅಲ್ಲಮಪ್ರಭುವಿನ ವಚನಗಳ ಸಿದ್ಧಾಂತವು ಶೂನ್ಯ ಸಂಪಾದನೆಯೇ ಎಂದು ಇಲ್ಲಿ ಸ್ಮರಿಸಬಹುದು.

1 comment:

  1. ಮನಸ್ಸು ಸತ್ಯ ಶುದ್ಧ ಭಾವದಿಂದ ಕೂಡಿದರೆ ಲಿಂಗೈಕ್ಕೆ ಭಾವ ಹೊಂದಬಹುದು.

    ReplyDelete