Sunday 7 October 2012

ವಚನ ಸಿಂಚನ ೫೩:ಪುನರ್ಜನ್ಮದಿಂದ ಮುಕ್ತಿ

ಪತ್ರೆಯ ತಿಂದಾಡು ಮುಕ್ತವಾದುದೆಂಬುದ
ಬಲ್ಲಡೆ ಹೇಳಿರಯ್ಯಾ ,
ಲಿಂಗವ ಪೂಜಿಸಿದ ಬಳಿಕ ವರ್ಣಿಕ ಲಿಂಗವಾದನೆಂಬುದ
ಬಲ್ಲಡೆ ಹೇಳಿರಯ್ಯಾ ,
ಜಂಗಮವ ಸಂತೃಪ್ತಿ ಪಡಿಸಿದ ಭಕ್ತ ಭವವಿರಹಿತನಾದುದ 
ಬಲ್ಲಡೆ ಹೇಳಿರಯ್ಯಾ ,
ಇವೆಲ್ಲ ಚತುರ್ವಿದ ಪದಕ್ಕೆ ಒಳಗು;
ತನ್ನ ತಾ  ತಿಳಿದ ವೀರಶೈವ ಭಾವಕ್ಕೆ ಬಂದನೆಂಬ ದ್ವಿರುಕ್ತಿಯನು 
ಬಲ್ಲಡೆ ಹೇಳಿರಯ್ಯಾ ,
ಕಪಿಲಸಿದ್ಧಮಲ್ಲಿಕಾರ್ಜುನ ಸಾಕ್ಷಿಯಾಗಿ....
                            -ಸಿದ್ಧರಾಮೇಶ್ವರ

ಈ ವಚನದಲ್ಲಿ ಸಿದ್ಧರಾಮ ಭಕ್ತಿಯ ಮೂಲಕ ಪುನರ್ಜನ್ಮದಿಂದ ಹೇಗೆ ಮುಕ್ತಿ ಪಡೆಯಬಹುದು ಎಂಬುದರ ಬಗ್ಗೆ ಬೆಳಕು ಚೆಲ್ಲುತ್ತಾನೆ.ಇಲ್ಲಿ ಕೆಲವು ನಿದರ್ಶನಗಳನ್ನು ಕೊಟ್ಟು ಸಿದ್ಧರಾಮ ವಿವರಿಸುತ್ತಾನೆ.ಶಿವ ಪೂಜೆಗೆ ಬಳಸುವ ಬಿಲ್ವ ಪತ್ರೆಯನ್ನು ತಿಂದ ಆಡು ಮುಕ್ತಿಯನ್ನು ಪಡೆಯಿತು,ಉಚ್ಚ ಜಾತಿಯಲ್ಲಿ ಹುಟ್ಟಿದಾತ ಲಿಂಗವ ಪೂಜಿಸಿದ ಬಳಿಕ ದೈವತ್ವವನ್ನು ಪಡೆದ,ಅದೇ ರೀತಿ ಜಂಗಮನನ್ನು ತೃಪ್ತಿ ಪಡಿಸಿದ ಬಳಿಕ ಭವಿಯು ಬಂಧಮುಕ್ತನಾಗುತ್ತಾನೆ,ಅನ್ದೆರ್ ಲೋಕದ ಮೇಲಿನ ತನ್ನ ಭವವನ್ನು ಕಳೆದುಕೊಳ್ಳುತ್ತಾನೆ.ಸಿದ್ಧರಾಮ ಹೇಳುತ್ತಾನೆ,ಸಂಪ್ರದಾಯಸ್ಥ ಉಚ್ಚ ಜಾತಿಯವರು ಆಧ್ಯಾತ್ಮಿಕವಾಗಿ ಇಷ್ಟು ಎತ್ತರಕ್ಕೆ ಏರಲು ಸಾಧ್ಯವಿಲ್ಲ ಎಂದು.

ಇವೆಲ್ಲ ಚತುರ್ವಿದ ಪದಕ್ಕೆ ಒಳಗು ಅಂದರೆ ಇಲ್ಲಿ ಉಚ್ಚ ಜಾತಿಯವರನ್ನು ಸಮಾಜದ ವರ್ಣ ಭೇದ ನೀತಿಯ ನಾಲ್ಕು ಜಾತಿಯ ವರ್ಗಗಳನ್ನು ಉಲ್ಲೇಖಿಸುತ್ತಾರೆ.(ಬ್ರಾಹ್ಮಣ,ಕ್ಷತ್ರಿಯ,ವೈಶ್ಯ,ಶೂದ್ರ).
ಈ ವಚನದ ಎರಡನೇ ನಿದರ್ಶನದಲ್ಲಿ ಕೂಡ ಭಕ್ತನೊಬ್ಬ ಜಾತಿ ವ್ಯವಸ್ಥೆಗೆ ಅಂಟಿ ಕೊಂಡಿರುವುದನ್ನು ತೋರಿಸುತ್ತದೆ.ಆತನಿಗೆ ತನ್ನ ಹುಟ್ಟಿನಿಂದ  ಬಂದಿರುವ  ಉಚ್ಚ ಜಾತಿಯೆಂಬ ಹೆಮ್ಮೆ ಇರಬಹುದು,ಆದರೆ ಆತ ವಚನಕಾರರಿಗೆ ಬೇರೆ ಭಕ್ತರಂತೆ ಸಮನಾಗಿಯೇ ಕಾಣುತ್ತಾನೆ ಹೊರಟು,ಈ ವ್ಯವಸ್ಥೆಯಲ್ಲಿ ಯಾರೂ ಉಚ್ಚರಲ್ಲ,ಯಾರೂ ನೀಚರಲ್ಲ ಎಂದು ವಚನಕಾರ ಹೇಳುತ್ತಾನೆ.ಆದ್ದರಿಂದ ಆತ ಕೂಡ ಅನುಭವದಿಂದ ಉಚ್ಚ ಸಾಧನೆಯನ್ನು ಮಾಡಬಹುದು.

ಇಂಥ ಒಂದು ಭಕ್ತಿಯ ನಡಿಗೆ ತನ್ನ ಆತ್ಮವನ್ನು ಇನ್ನೊಂದು ದೈವ ಪ್ರಪಂಚಕ್ಕೆ ಒಪ್ಪಿಸುವುದಾದರೆ,ಆತ ಪುನರ್ಜನ್ಮದಿಂದ ಮುಕ್ತಿ ಪಡೆದ ಹಾಗೆ ಎಂದು ಸಿದ್ಧರಾಮ ಹೇಳುತ್ತಾನೆ.ಲಿಂಗ ಪೂಜೆಯಿಂದಾಗಿ ಎಲ್ಲರೂ ಸಮನಾಗುತ್ತಾರೆ.
ಆದ್ದರಿಂದ ಜಾತಿ ವ್ಯವಸ್ಥೆ ದೂರ ಆಗುತ್ತದೆ ಎನ್ನುವ ಮಾತನ್ನು ಕೂಡ ಈ ವಚನ ವಿವರಿಸುತ್ತದೆ.

1 comment:

  1. ಈ ವಚನ ಮತ್ತು ನಿಮ್ಮ ಭಾವಾರ್ಥ ತುಂಬಾ ಚೆನ್ನಾಗಿದೆ.

    ಭಕ್ತಿಯನ್ನು ಉಣಿಸುತ್ತಾ, ಜಾತಿ ಪದ್ಧತಿಯನ್ನು ವಿರೋಧಿಸುತ್ತಾ ಲಿಂಗ ಪೂಜೆಯಿಂದ ಜಾತಿ ವ್ಯವಸ್ಥೆ ದೂರವಾಗುತ್ತದೆ ಎನ್ನುವ ಬೃಹದ್ ಆಶಯ.

    ReplyDelete